ದಾಸೋಹ ದಿನದ ಶುಭಾಶಯಗಳು
.
-
ಸಾಹಿತ್... read more
ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಖ್ಯಾತ ಲೇಖಕಿ ಶ್ರೀಮತಿ ಪುಷ್ಪ. ಎಚ್.ಎಲ್ ಅವರಿಗೆ
ಅಭಿಮಾನದ ಅಭಿನಂದನೆಗಳು.-
ಪ್ರೇಮರಾಗ
ಹಾಡೋಣ ಬಾ ಗೆಳೆಯ ಪ್ರೇಮಾನುರಾಗ
ನೀಡುವೆ ನಿನಗೆ ಹೃದಯದಲಿ ಜಾಗ
ಕೇಳುತಿರು ನಿತ್ಯವೂ ಒಲವ ಮಿಡಿತ
ನಿನ್ನಾಗಮನಕಾಗಿ ನನ್ನೆದೆಯಾ ತುಡಿತ
ಸಾರಥಿಯಾಗುವೆಯಾ ನನ್ನ ಪ್ರೇಮರಥಕೆ
ಎಚ್ಚರದಿ ಕರೆದೊಯ್ಯುವೆಯಾ ಬಾಳ ದಡಕೆ
ಬೇಗ ಕೂಡಿ ಬರಲಿ ಒಂದಾಗುವ ಸುಯೋಗ
ಆ ಸುಂದರ ಕ್ಷಣಕ್ಕಾಗಿ ಮಾಡುತಿರುವೆ ನಾ ಯಾಗ
ಜಿನಗುತಿಹ ಅಧರಾಮೃತವ ಸವಿಯಲು ಬರುವೆಯಾ
ಹಾಲ್ನೊರೆಯ ಬೆಳದಿಂಗಳಲಿ ಶೃಂಗಾರ ಕಾವ್ಯ ಬರೆಯುವೆಯಾ
ಗರಿಬಿಚ್ಚಿ ಕುಣಿವ ಮನದಾಸೆಗಳ ನನಸಾಗಿಸುವೆಯಾ
ನೀಳವಾದ ಬಾಹುಗಳ ತೆಕ್ಕೆಯಲಿ ಬಂಧಿಸುವೆಯಾ
ನಮ್ಮಿಬ್ಬರ ಸಾಂಗತ್ಯ ಸಿಹಿಯಾದ ಸಕ್ಕರೆ
ಕಡಿಮೆಯಾಗದಿರಲೆಂದು ಅದರೊಳಗಣ ಅಕ್ಕರೆ
ಕಾರಂಜಿಯಾಗಿರಲಿ ನಮ್ಮಿಬ್ಬರ ಪ್ರೀತಿಯ ಒರತೆ
ಮೂಡಗೊಡದಿರು ಗೆಳೆಯ ಯಾವುದೇ ಕೊರತೆ-
ಕನಸಲ್ಲೂ ಕನವರಿಸುತ್ತಿರುವೆ
ಖಾತ್ರಿಯಿದೆ ಎನಗೆ ನೀ ಬರುವೆ
ಸದಾ ನಿನ್ನನೆ ಧ್ಯಾನಿಸುತಿರುವೆ
ದರ್ಶನ ನೀಡದೆ ಎಲ್ಲಿ ಹೋಗುವೆ
ಮನದ ಭಾವಗಳಿಗೆ ಕಚಗುಳಿಯಿಡುವೆ
ನೆನಹುಗಳ ನಿನ್ನೆದೆಗೆ ಆತುಕೊಂಡಿರುವೆ
ಕಾಡುವ ಬಯಕೆಗಳ ನೀ ಮೀಟುತ್ತಿರುವೆ
ನಿನ್ನೊಲವಿಗಾಗಿ ಕಾತುರದಿ ನಾ ಕಾಯುತಿರುವೆ
ನೀ ಮುನಿದು ದೂರ ಸರಿಯ ಬೇಡ
ಏಕಾಂಗಿಯಾಗಿ ಬದುಕುವ ಸ್ಥಿತಿ ನೀಡಬೇಡ
ನೀ ಜೊತೆಯಾಗಿ ಹೆಜ್ಜೆ ಹಾಕುವುದು ಮರಿಬೇಡ
ನನ್ನೆದೆಯ ಬರಡು ಕಾನನ ಮಾಡಬೇಡ
ಸೋತು ಶರಣಾಗಿರುವೆ ಅನನ್ಯ ಅನುರಾಗಕೆ
ಬಾಳ ಗೀತೆಗೆ ಪ್ರಥಮ ಪಲ್ಲವಿ ನಿನಾಗಿರುವುದಕೆ
ಪುಳಕದಲಿ ಮಿಂದೆದ್ದು ಭಾವುಕಳಾಗಿರುವೆ
ನಿನ್ನ ಹೃದಯದ ಅರಮನೆಯ ತರಂಗಿಣಿಯಾಗಿರುವೆ-
ಪ್ರೀತಿಯ ಕೈಚಳಕ ಅಪೂರ್ವ
ಪ್ರೇಮಿಗಳಲ್ಲಿ ಒಲವಿನ ಪರ್ವ
ಕಣ್ಣುಗಳ ಮಿಲನ ಮಹೋತ್ಸವ
ಹೃದಯಗಳ ಸ್ಪಂದನದ ಉತ್ಸವ
ಮನದೊಳಗೆ ಮೋಹದ ಛಾಯೆ
ಬಿಡದೆ ಕಾಡುವ ಆಸೆಗಳ ಮಾಯೆ
ಚಂದ್ರ ಕಾಂತಿಯ ಮೊಗದಲಿ ಕನಸುಗಳು
ನನಸಾಗಿಸಲು ನಲ್ಲನೆದೆಯಲಿ ತವಕಗಳು
ಭಾವನೆಗಳು ಯೌವ್ವನದ ಸುಂದರ ಪಾಕ
ಬೆಸೆದರೆ ಜೀವನವೆಲ್ಲಾ ಆಗುವುದು ನಾಕ
ಹಗಲಿರುಳು ಕಾಡುವುದು ಪ್ರೀತಿಯ ದಾಹ
ತಣಿಸಲು ಬೇಕು ನಲ್ಲನ ಸರಸದ ಮೋಹ
ಸೂತ್ರ ಹರಿದ ಗಾಳಿಪಟವಾದರೆ ಒಲವು
ಬಾಳಿನಲ್ಲಿ ಇರುವುದಿಲ್ಲ ಮೋಹಕ ಚೆಲವು
ಪ್ರೇಮ ಆರಾಧನೆಗೆ ದೊರೆತರೆ ಗ್ರೀನ್ ಸಿಗ್ನಲ್
ಜನ್ಮತಾಳುವವು ಪ್ರೀತಿಯ ಸಾವಿರಾರು ಗಜಲ್-
ಒಲವ ಅರಿಯಲು
ಕಂಗಳ ಪುಸ್ತಕಕ್ಕಿಂತ
ಬೇರಾವ ಬರಹ ಬೇಕಿಲ್ಲ
ಹೊತ್ತಿಗೆಯಲಿ ಮುದ್ರಿಸಲಾಗದ
ಭಾವಗಳನ್ನೆಲ್ಲ ಬಿತ್ತರಿಸುವ
ನೋಟವೇ ಪ್ರೇಮ ಗಂಥಾಲಯ
ಮಾತು ಮೌನ ಧರಿಸಲು
ನಡೆಯಿತು ಸಂಭಾಷಣೆ
ನಮ್ಮಿಬ್ಬರ ಕಂಗಳಲಿ
ಹೇಳಲಾಗದ ಓದಲಾಗದ
ಅದೆಷ್ಟೋ ಕವಿತೆಗಳನು
ಕಂಗಳಲಿ ಓದಿ ಅರಿತೆ ನಾನು
ನನ್ನೆದೆಯ ದರ್ಪಣದಂತೆ
ನಿನ್ನ ಮಿಂಚುಳ್ಳಿಯ ನಯನಗಳು
ಸದ್ದಿಲ್ಲದೇ ಹೃದಯದಿಂದ
ಜಾರಿದವು ಆನಂದಬಾಷ್ಪ
ನಲುಮೆಯಲಿ ಅರ್ಪಿಸಿತೆನ್ನ
ಮನವು ಸುಂದರ ಪುಷ್ಪ-
ತುಂಬಿಸುವುದು ಮಸ್ತಕ
ಅಕ್ಷರಗಳೇ ನಿನಗೆ ಮುತ್ತು
ಓದುಗರಿಗೆ ತರಿಸುವೆ ಮತ್ತು
ಸಕಲವು ತುಂಬಿದ ಬಂಡಾರ
ಧರಿಸಿದರೆ ಜೀವನ ಸುಂದರ
ಬರಹಗಾರರ ಭಾವಗಳ ಹೊತ್ತು
ನೋಯದೆಂದು ನಿನಗೆ ಕತ್ತು
ಲೇಖನಿಗೆ ಒಲವಿನ ರಾಣಿ
ಚಿತ್ತಾರ ತುಂಬಿದ ವಾಣಿ
ನೋವು ಮರೆಸುವ ಮಾಂತ್ರಿಕ
ಮನದಿ ನೆಲೆಸುವ ಪ್ರಫುಲ್ಲಕ-
ನ್ಯಾನೋ ಕಥೆ
ಒಂದು ರೂಪಾಯಿ ನಾಣ್ಯ
ಕಲಿಸಿದ ಜೀವನ ಪಾಠ
👇Read Caption Below👇-
ಮೊದಲ ನೋಟದಲ್ಲೇ
ಕಂಗಳಲಿ ಸೆರೆಹಿಡಿದು
ಚಿತ್ರವನ್ನು ಚಿತ್ತದಲಿ
ಬಂಧಿಸಿದವನು ನೀ
ಅನ್ಯನಲ್ಲ ನನ್ನ ಮೆಚ್ಚಿದವನು
ಮೊಗದಲ್ಲಿ ಕಿರುನಗೆಯ
ಹೂವನರಳಿಸಿ ನೀನೇ
ನನ್ನೆದೆಯ ಮಂದಾರ
ಪುಷ್ಪವೆಂದವನು ನೀ
ಅನ್ಯನಲ್ಲ ನನ್ನ ವರ್ಣಿಸಿದನು
ಇರುಳೆಲ್ಲ ಕನಸಲ್ಲಿ ಬಂದು
ನಿದಿರೆಯಲು ಕಾಡುತ
ಹಗಲಿನಲ್ಲಿ ಕನವರಿಸುತ
ಮನಸ್ಸನ್ನು ಕದ್ದ ಚೋರ
ನೀ ಅನ್ಯನಲ್ಲ ನನ್ನ ಕಾಡುವವನು
ನಿನ್ನ ಕಂಡೊಡನೆ ನಾಚಲು
ಬಾಹುಗಳಲ್ಲಿ ಬಂಧಿಸುತ
ಹಣೆಗೊಂದು ಸಿಹಿ ಮುತ್ತನಿತ್ತು
ಒಲವಿನಲಿ ಅಪ್ಪಿದವನು ನೀ
ಅನ್ಯನಲ್ಲ ನನ್ನ ಪ್ರೀತಿಸಿದವನು-