ಈಗಷ್ಟೇ ದೇವರ ಕಂಡೆ
ಹೂಬಿರಿದ ಸದ್ದಲ್ಲಿ!!
-
ರೆಕ್ಕೆ ಕಟ್ಟಿ ಅನಂತಕ್ಕೆ ಹಾರಿದ ಹಕ್ಕಿಯ ಹೆಜ್ಜೆಗುರುತ ಜಾಡು💕
... read more
ಹುಡುಗ,
ನಿನ್ನ ನಗುವನೆಲ್ಲ ಬಾಚಿ
ಆ ಮುಗಿಲ ಬಳಿ
ಅಡವಿಟ್ಟು ಬಂದಿದ್ದೆ.
ಅವನೀಗ ಅದರಿಂದ
ಕಾಮನಬಿಲ್ಲು
ಹೊಸೆದಿದ್ದಾನಂತೆ!!-
ಇಲ್ಲಿರುವ ಬರಹಗಳೆಲ್ಲ
ಈಗಷ್ಟೇ ಬಿಡಿಸಿಟ್ಟ ಅರಳು
ಮಲ್ಲಿಗೆ, ಜಾಜಿ, ಸಂಪಿಗೆಯಂತೆ!!
ಓದಿದಷ್ಟು ಆಪ್ತವಾಗುತ್ತವೆ
ಮಾಗಿದಷ್ಟು ಘಮಿಸುವ
ಕೇದಗೆ, ಸೊರಗಿಯಂತೆ!!
ಒಮ್ಮೆ ಸೋಕಿದರೆ ಸಾಕು
ಇದರ ಘಮಲೇರುತ್ತದೆ
ಇಳಿಯದ ಅಮಲೇರುತ್ತದೆ!!-
ಒಡೆದ ಮಾಡಿನ ಸೂರಿನಿಂದ
ಬೆಳಕಷ್ಟೇ ಸೋರಿದಂತೆ!
ಈ ಹೃದಯ ಒಡೆದಾಗ್ಲೂ
ಅದರಿಂದ ಪ್ರೀತಿಯಷ್ಟೇ ಸಿಗ್ಲಿ!!-
ದಿನವಿಡೀ ಜಿಟುಗುಡುವ ನಿನಗೇನು ಗೊತ್ತು??
ನಿನ್ನ ಸ್ಪರ್ಶ ತಾಕಿ ಒದ್ದೆಯಾಗಿದ್ದು ಬರೀ ನೆಲವಲ್ಲವೆಂದು!!-
ಎಲ್ಲ ದಿಗ್ಗಜರ ಹುಟ್ಟುಹಬ್ಬಕ್ಕೆ ಚಿತ್ರಪಟ,
ನಡುರಾತ್ರೆ ಕವನ (ಕನ್ನಡ ಸಾಹಿತಿಯಾದಲ್ಲಿ) ಹಾಕಿ ಸಂಭ್ರಮಿಸುವ ಜೋಗಿ ಅವರು ನಾಡಿನ ಅಪ್ರತಿಮ ಸಾಹಿತಿಯಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುದಿನ ಮರೆಯಬಾರದಿತ್ತು✌🏼-
ಆ ಕಡಲು ಹೆಜ್ಜೆ ಗುರುತು ಅಳಿಸುವುದಲ್ಲ
ತನ್ನೊಡಲೊಳಗೆ ಸೇರಿಸಿಕೊಳ್ಳುವುದೆಂಬ ಸತ್ಯ
ಅದರೊಂದಿಗೆ ಪ್ರೀತಿಗೆ ಬಿದ್ದವರಿಗಷ್ಟೇ ಗೊತ್ತಿರುವುದು!-
ನಿನ್ನೂರಿಂದ ಹೊರಡುವ ದಾರಿ
ಹಸಿ ಮಣ್ಣಿನದ್ದಾಗಿರಲಿ!!
ನೀನೆದ್ದು ಹೊರಟಾಗ
ನನ್ನ ಪಾಲಿಗೆ
ಹೆಜ್ಜೆ ಗುರುತಾದರು ಉಳಿಯಲಿ!!
-
ಖುಷಿಯಾದವರೆಲ್ಲ ಮಳೆಗೆ
ಕುಣಿಯುತ್ತಾರಂತೆ
ಉಹುಂ!!
ನನ್ನ ಕೇಳಿ
ಎದೆಯಲ್ಲಿ ಮೋಡ ಕಟ್ಟಿದರೂ,
ಮಳೆಯಲ್ಲಿ ನೆನೆಯುತ್ತಾರೆ!!
-