ಅನಾಮಧೇಯ   (ಅನಾಮಧೇಯ)
124 Followers · 40 Following

read more
Joined 12 July 2018


read more
Joined 12 July 2018
14 AUG AT 17:46

ಭುವಿಗೆ ಬಂದಾಗ
ತಂದೆ ತಾಯಿರನ್ನು ಆಯ್ಕೆ
ಮಾಡಿ ಬರಲು ಆಯ್ಕೆ ಇರಲಿಲ್ಲ
ಮರಳಿ ಮಣ್ಣಿಗೆ ಹೋಗುವಾಗಲೂ
ನಮಗೆ ನಮ್ಮದೇ ಆಯ್ಕೆ ಇರುವುದಿಲ್ಲ.
ಇವೆರಡರ ಮಧ್ಯೆ
ಎಲದಕ್ಕೂ ಆಯ್ಕೆ:
ಓದುವುದು
ಕೆಲಸ - ವೃತ್ತಿ
ಸಂಗಾತಿ
ಮನೆ, ಕಾರು, ಬಂಗಲೆ.. ಇನ್ನೂ ಏನೇನೋ..
ಆಯ್ಕೆ ರಹಿತ ಜೇವನ ಸಾಧ್ಯವೇ?

ಆಯ್ಕೆ ಇಲ್ಲದ ಮನಸ್ಸನ್ನು
ರೂಢಿಸಿಕೊಂಡಲ್ಲಿ
ನಮ್ಮ ಪ್ರಜ್ಞಾ ಮಟ್ಟವನ್ನು
ವಿಸ್ತರಿಸಿಕೊಂಡಲ್ಲಿ
ಸಮಚಿತ್ತದ ಜೀವನದ
ಒಂದು ಮೆಟ್ಟಿಲು ಏರಿದ ಹಾಗೆ ಕಣೋ ಮೂಢ..
ಇದಕ್ಕೆ ಧ್ಯಾನ ಒಂದು ಮಾರ್ಗವಾದೀತು

-



ಸಮಯ ಮತ್ತು ಪರಿವರ್ತನೆ:

ಸರಿ ತಪ್ಪುಗಳು
ಅಯಾ ಕಾಲ, ಸ್ಥಳ ಮತ್ತು
ಮನಸ್ಸಿನ ಸಮಯಕ್ಕೆ
ನಡೆಯುವ - ನಡೆಸಿಕೊಳ್ಳುವ
ಘಟನೆಗಳು ಅಷ್ಟೇ ಮೂಢ!

ಬದಲಾವಣೆ ಎನ್ನುವುದು ಜಗದ
ಗಡಿಯಾರ ಕಾಲದ ನಿಯಮ

ಆದರೆ ಪರಿವರ್ತನೆ ಎನ್ನುವುದು
ವೈಯಕ್ತಿಕ ವ್ಯಕ್ತಿಗಳಲ್ಲಿ
ಗಡಿಯಾರದ ಕಾಲದ ಹೊರತಾಗಿ
ಮನಸ್ಸಿನ ಕಾಲಕ್ಕೆ ಅನುಗುಣವಾಗಿ
ನಡೆಯ ಬೇಕಾಗಿರುವುದು ಮತ್ತು
ನಡೆಯುತ್ತಾ ಇರುವುದು

-



ಬಾಬಿಲೋನಿಯನ್ ಸಾಮ್ರಾಟ ಹಮ್ಮುರಾಬಿ, ಕ್ರಿ.ಪೂ. 1754 ರಲ್ಲಿ
ವಿಧನ್ಯಾಸದ ನ್ಯಾಯ ಶಾಸ್ತ್ರದಲ್ಲಿ
"Eye for an eye"
( ಕಣ್ಣಿಗೆ ಹಾನಿ ಮಾಡಿದರೆ ಕಣ್ಣು ಕಳೆದು ಕೊಳ್ಳುವ ಶಿಕ್ಷೆ )
ಅಂಧ ಪ್ರತೀಕಾರ ತತ್ವ.

ಗಾಂಧೀಜಿ ಹೇಳಿದ್ದು :
Eye for an eye makes the whole world blind
( ಕಣ್ಣಿಗೆ ಕಣ್ಣು ಎನ್ನುವ ತತ್ವ ಪಾಲಿಸಿದರೆ
ಇಡೀ ಜಗತ್ತೆ ಕಣ್ಣು ಮುಚ್ಚುತ್ತದೆ )

read the caption below 👇

-



ಒಬ್ಬ ವ್ಯಕ್ತಿಯನ್ನು ಕೊಲ್ಲುವುದು
ಅಥವಾ ಗಲ್ಲು ಶಿಕ್ಷೆಗೆ ಒಳ ಪಡಿಸುವುದು
ಶೋಷಣೆಯಷ್ಟೇ ಕ್ರೂರ ( ಮೃಗತ್ವ )

ಇಲ್ಲಿ ವ್ಯಕ್ತಿ ಅಪರಾಧಿ ಆಗಿದ್ದರೆ
ಅಪರಾಧಿಯನ್ನು ಕೊಲ್ಲುವುದು
ಅಯಾ ಕಾಲ - ಸ್ಥಳಕ್ಕೆ - ಸಂದರ್ಭಕ್ಕೆ
ನ್ಯಾಯ ಸಮ್ಮತವಾಗಿದ್ದರೂ ಸಹ
ಕೊಲ್ಲುವುದು ಮಾನವೀಯತೆಯಲ್ಲ
ಹಾಗೂ ಅದು ಸಮಾಜದ ಪರಿವರ್ತನೆಗೆ
ಸೋಪಾನವೂ ಅಲ್ಲ.

ಶಿಕ್ಷೆಯಾಗಬೇಕಾಗಿರುವುದು
ಅಪರಾಧವೆಸಗಿರುವ ಪ್ರಜ್ಞಾ ಮನಸ್ಸಿಗೆ,
ಶಿಕ್ಷೆಯ ಉದ್ದೇಶ ಪರಿವರ್ತನೆಗಾಗಿ ಇರಬೇಕು
ಹಾಗೂ ವ್ಯಕ್ತಿ ಮತ್ತು ಸಮಾಜವನ್ನು
ಮೇಲ್ಮುಖದೆಡೆಗೆ ಕೊಂಡೂಯ್ಯುವ
ನಿಟ್ಟಿನಲ್ಲಿ ಇರಬೇಕು.

-



ಪ್ರಚೋದನೆ, ಅಸಹಾಯಕತೆಯ ದುರ್ಬಳಕೆ
ಹಣದ, ಅಧಿಕಾರದ ಮದ, ಆಮಿಷ
ಇವು ಮಾನವನ ನೈತಿಕತೆಯ ಅಧಂಪತನಕ್ಕೆ ಕಾರಣ ಎನ್ನಬಹುದು
ಅಥವಾ ನಾಗರೀಕತೆಯ ಪಥದಲ್ಲಿ
ಇದೆಲ್ಲಾ ಸಾಮಾನ್ಯ ಎನ್ನುವ ಜನಸಂಖ್ಯೆಯೂ ಉಂಟು

ಶೋಷಣೆಗೆ ಒಳಪಟ್ಟ ವ್ಯಕ್ತಿಗೆ ಮಾತ್ರ
ಶೋಷಣೆ ಎಂದರೆ ಏನು, ಅದರ ನೋವು, ಹಿಂಸೆಯ ಅರಿವು ಮೂಡಿ ಇರುತ್ತದೆ
ಆಧುನಿಕತೆಯ, ನಾಗರೀಕತೆಯ ಸೊಬಗಿನಲ್ಲಿಯೋ, ಸೊಡರಿನಲ್ಲಿಯೋ
ಪ್ರಕೃತಿಯ ಮತ್ತು ಮಾನವನ
ಭೌತಿಕ ಮತ್ತು ಆಂತರಿಕ ಶೋಷಣೆ ಸರ್ವ ಸಾಮಾನ್ಯವಾಗಿದೆ ಮೂಢ

ಸಾಗಬೇಕಿದೆ ಆಗೊಮ್ಮೆ - ಈಗೊಮ್ಮೆ
ಕಣ್ಣು ಮುಚ್ಚಿ, ಕೆಪ್ಪನಾಗಿ, ಮೂಗನಾಗಿ ತಂದೆ 🙏

-


27 APR AT 21:54

ಉದಾತ್ತ ಆಲೋಚನೆಗಳು
ಮನಸ್ಸಿನಲ್ಲಿ ಮೂಡಿ ಬರಲಿ
ಆ ಆಲೋಚನೆಗಳು ಬೆಳೆಯಲಿ
ಮತ್ತು ಆಲೋಚನೆಗಳನ್ನು ಗಮನಿಸುವ

ನಮ್ಮ ಒಳ್ಳೆಯ ಕಾರ್ಯಗಳು
ಮತ್ತು ಕ್ರೀಯೆಗಳೊಂದಿಗೆ
ಉದಾತ್ತ ಆಲೋಚನೆಗಳನ್ನು
ಪರಸ್ಪರ ವಿನಿಮಯ ಮಾಡಿಕೊಳ್ಳಲು
ಅವಕಾಶ ಮಾಡಿಕೊಡುವ

ಆಗ ವೈಯಕ್ತಿಕ ಮನಸ್ಸಿನ ಗ್ರಹಿಕೆ
ಸಾಮರ್ಥ್ಯವು ಹೆಚ್ಚಾಗುತ್ತದೆ
ಮತ್ತು ತರುವಾಯ
ಸಾಮೂಹಿಕ ಪ್ರಜ್ಞೆಯೂ ಹೆಚ್ಚಾಗುತ್ತದೆ.

-



ಬಾಂಧವ್ಯ ಎಂದರೆ
ಷರತ್ತುಬದ್ಧ ಪ್ರೀತಿ

ನಿರ್ಲಿಪ್ತತೆ ಎಂದರೆ
ಬೇಷರತ್ತಾದ ಪ್ರೀತಿ

-


31 MAR AT 11:07

ಮನಸ್ಸು ಸ್ವಾರ್ಥದ ಎಲ್ಲೆ ಮೀರಿ
ಭ್ರಷ್ಟಾಚಾರದ ಬದುಕು
ಉನ್ನತ ಶಿಖರವ ತಲುಪುತ್ತಾ ಇದೆ
ದೇವರ ಹೆಸರಿನಲ್ಲಿ
ಧರ್ಮದ ಹೆಸರಿನಲ್ಲಿ
ಸಾಧು ಸಂತರ ಹೆಸರಿನಲ್ಲಿ
ಸಮಾಜ ಸೇವನೆಯ ಹೆಸರಿನಲ್ಲಿ
ವೃತ್ತಿಯ ಹೆಸರಿನಲ್ಲಿ
ಅಧಿಕಾರದ ಹೆಸರಿನಲ್ಲಿ
ಅಜ್ಞಾನದ ವಿಮೋಚನೆಯೇ ಮುಕ್ತಿಗೆ ಸೋಪಾನ
ಇದಕ್ಕೆ ಧ್ಯಾನ ಒಂದೇ ಮಾರ್ಗ ಕಣೋ ಮೂಢ 🌱🙏

-


30 MAR AT 23:08

ಸಕಾರಾತ್ಮಕ ಮನಸ್ಥಿತಿಯು
ವಿಶ್ವದಲ್ಲಿ ಪ್ರೀತಿ ಕರುಣೆ ಮತ್ತು
ಸಾಮರಸ್ಯವನ್ನು ತುಂಬುತ್ತದೆ.

ಲೋಕದ ಸಮಸ್ತ ಜೀವಿಗಳಿಗೆ
ವಿಶ್ವಾಸು ನಾಮ ಸಂವತ್ಸರದ
ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು 🌿🙏

-



sow a thought, reap an act ;
sow an act, reap a habit ;
sow a habit, reap a character;
sow a character, reap a destiny

- ಉಪನಿಷತ್





-


Fetching ಅನಾಮಧೇಯ Quotes