ಪ್ರತಿ ವ್ಯಕ್ತಿಯು ಸ್ವತಂತ್ರನೇ ನಿಜ ಆದರೆ ಕುಟುಂಬದ ಮತ್ತು ಸಮಾಜದ ಜವಾಬ್ದಾರಿಯ ಚೌಕಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಆ ವ್ಯಕ್ತಿಯ ಶಿಸ್ತು ಮತ್ತು ತಾಳ್ಮೆಯ ಮೇಲೆ (ಸಹನೆ, ಸೈರಣೆ) ಅವಲಂಬಿಸಿರುತ್ತದೆ ಹಾಗೂ ಅದು ಸಂಸ್ಕಾರವನ್ನು ಕೂಡ ಪ್ರತಿ ಬಿಂಬಿಸುತ್ತದೆ ಕಣೇ
ಕಲಿಯುಗದಲ್ಲಿ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು ಕುಸಿಯುತ್ತವೆ, ಹಾಗೂ ಅದು ಸಮಾಜದ ವಿಘಟನೆಗೆ ಕಾರಣವಾಗುತ್ತದೆ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿ ಇರುವುದನ್ನು ನೆನಪಿಸಿ ಕೊಂಡು ನಾಲ್ಕು ಸಾಲು ಗೀಚಿ ಇರುವೆ ಅಷ್ಟೇ ಕಣೇ
ನಕಾರಾತ್ಮಕವಾದ ಸಂಸ್ಕಾರವಿರುವವರ ಒಡನಾಟ ನಮ್ಮ ಸಕಾರಾತ್ಮಕ ವಿಕಾಸಕ್ಕೆ ಅಡ್ಡಿಯಾಗುತ್ತವೆ
ನಕಾರಾತ್ಮಕವಾದ ಇನ್ನೊಬ್ಬರ ಸಂಸ್ಕಾರಗಳು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಮೂಡಿಸಿವುದರ ಜೊತೆಗೆ ಸ್ವಯಂ-ವಿನಾಶಕಾರಕ್ಕೆ ನಾಂದಿಯಾಗುವುದರಿಂದ ನಮ್ಮ ಸಕಾರಾತ್ಮಕ ವಿಕಾಸಕ್ಕೆ ಅಡ್ಡಿಯಾಗದಂತೆ ಕರ್ಮ ಮಾಡುವುದು ಜ್ಞಾನಿಗಳ ಲಕ್ಷಣ ಮೂಢ
ಪ್ರತಿ ಒಬ್ಬರ ಕೈಯಲ್ಲಿ ಬೆರಳುಗಳು ಇರುವಂತೆ ಎಲ್ಲರೂ ಒಂದಾಗಿ ಇರುವಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಯಾರು ಯಾರಿಗೆ ನೋವುಂಟುಮಾಡಿದರೂ ಅದು ಇತರರಿಗೆ ನೋವುಂಟು ಮಾಡಿದಂತೆಯೆ ಆಗುತ್ತದೆ ಮತ್ತು ಒಬ್ಬರ ಸಂತೋಷವು ಇತರರ ಎದೆಯಲ್ಲಿ ಪ್ರತಿಧ್ವನಿಯಾಗಿ ಕಾಣದಿದ್ದರೆ, ಅಗತ್ಯವಿರುವ ಪರಿಸ್ಥಿತಿಗಳು ಇರುವುದಿಲ್ಲ ಮತ್ತು ಮುಂದುವರಿಯುವುದು ನಿಷ್ಪ್ರಯೋಜಕವೇ ಸರಿ ಮೂಢ 🙏