ಉದಾತ್ತ ಆಲೋಚನೆಗಳು
ಮನಸ್ಸಿನಲ್ಲಿ ಮೂಡಿ ಬರಲಿ
ಆ ಆಲೋಚನೆಗಳು ಬೆಳೆಯಲಿ
ಮತ್ತು ಆಲೋಚನೆಗಳನ್ನು ಗಮನಿಸುವ
ನಮ್ಮ ಒಳ್ಳೆಯ ಕಾರ್ಯಗಳು
ಮತ್ತು ಕ್ರೀಯೆಗಳೊಂದಿಗೆ
ಉದಾತ್ತ ಆಲೋಚನೆಗಳನ್ನು
ಪರಸ್ಪರ ವಿನಿಮಯ ಮಾಡಿಕೊಳ್ಳಲು
ಅವಕಾಶ ಮಾಡಿಕೊಡುವ
ಆಗ ವೈಯಕ್ತಿಕ ಮನಸ್ಸಿನ ಗ್ರಹಿಕೆ
ಸಾಮರ್ಥ್ಯವು ಹೆಚ್ಚಾಗುತ್ತದೆ
ಮತ್ತು ತರುವಾಯ
ಸಾಮೂಹಿಕ ಪ್ರಜ್ಞೆಯೂ ಹೆಚ್ಚಾಗುತ್ತದೆ.-
ಮನಸ್ಸು ಸ್ವಾರ್ಥದ ಎಲ್ಲೆ ಮೀರಿ
ಭ್ರಷ್ಟಾಚಾರದ ಬದುಕು
ಉನ್ನತ ಶಿಖರವ ತಲುಪುತ್ತಾ ಇದೆ
ದೇವರ ಹೆಸರಿನಲ್ಲಿ
ಧರ್ಮದ ಹೆಸರಿನಲ್ಲಿ
ಸಾಧು ಸಂತರ ಹೆಸರಿನಲ್ಲಿ
ಸಮಾಜ ಸೇವನೆಯ ಹೆಸರಿನಲ್ಲಿ
ವೃತ್ತಿಯ ಹೆಸರಿನಲ್ಲಿ
ಅಧಿಕಾರದ ಹೆಸರಿನಲ್ಲಿ
ಅಜ್ಞಾನದ ವಿಮೋಚನೆಯೇ ಮುಕ್ತಿಗೆ ಸೋಪಾನ
ಇದಕ್ಕೆ ಧ್ಯಾನ ಒಂದೇ ಮಾರ್ಗ ಕಣೋ ಮೂಢ 🌱🙏
-
ಸಕಾರಾತ್ಮಕ ಮನಸ್ಥಿತಿಯು
ವಿಶ್ವದಲ್ಲಿ ಪ್ರೀತಿ ಕರುಣೆ ಮತ್ತು
ಸಾಮರಸ್ಯವನ್ನು ತುಂಬುತ್ತದೆ.
ಲೋಕದ ಸಮಸ್ತ ಜೀವಿಗಳಿಗೆ
ವಿಶ್ವಾಸು ನಾಮ ಸಂವತ್ಸರದ
ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು 🌿🙏
-
sow a thought, reap an act ;
sow an act, reap a habit ;
sow a habit, reap a character;
sow a character, reap a destiny
- ಉಪನಿಷತ್
-
ಥಿಯೊಸೊಫಿ :
ಪ್ರಾಚೀನ ಧರ್ಮಗಳು ಮತ್ತು ಪುರಾಣಗಳಿಂದ,
ವಿಶೇಷವಾಗಿ ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮದಿಂದ
ಪಡೆದ ತತ್ವಶಾಸ್ತ್ರ ಮತ್ತು ಅತೀಂದ್ರಿಯ ಶಕ್ತಿಯನ್ನು
ಒಳನೋಟದ ಮೂಲಕ
ದೇವರನ್ನು ( ಅಥವಾ ಅಗೋಚರ ಶಕ್ತಿ ಯನ್ನು ) ತಿಳಿದುಕೊಳ್ಳಬಹುದು
ಎಂದು ಕಲಿಸುತ್ತದೆ.
ಎರಡನೆಯದಾಗಿ,
ಥಿಯೊಸೊಫಿ ಸಂಪೂರ್ಣವಾಗಿ
ಅತೀಂದ್ರಿಯ ಒಳನೋಟವನ್ನು
ಆಧರಿಸಿದ ನಿರ್ದಿಷ್ಟ ಧರ್ಮವನ್ನು ಸೂಚಿಸುತ್ತದೆ
-
ಶೂನ್ಯ
ಸತ್ಯತೆ
ಸಹಿಷ್ಣುತೆ
ಔದಾರ್ಯ
ಸಧ್ಬಾವನೆಯ ನಡವಳಿಕೆ
ಸ್ವಯಂ ತನು ಮನ ನಿಯಂತ್ರಣ
ಕ್ರೌರ್ಯದ ಸಂಪೂರ್ಣ ಅನುಪಸ್ಥಿತಿ
ಕರುಣೆಯ ಗುಣಗಳನ್ನು ಹೊಂದಿರುವವನೇ ಬ್ರಾಹ್ಮಣ
-
ಬಟ್ಟೆಗಳ ಬದಲಿಸುತ್ತಾ ಹೋದೆ
ಬಣ್ಣ ಹೊಂದಲಿಲ್ಲವೆಂದೊ !
ಆ ಬಣ್ಣ ಬೋರ್ ಅಯಿತೆಂದೊ
ಸೈಜ್ ದೊಡ್ಡದಾಯಿತೊ, ಚಿಕ್ಕದಾಯಿತೆಂದೊ
ಮನೆಗಳ ಬದಲಿಸುತ್ತಾ ಸಾಗಿದೆ
ಚಿಕ್ಕದಾಯಿತೆಂದೊ
ಹಳೆಯದಾಗಿದೆಂದೊ
ಔಟ್ ಡೇಟೆಡ್ ಎಂದೊ
ಆದರಿಂದು
ಆಧುನಿಕತೆಯ ನೆಪದಲ್ಲಿ
ತನು ಮನಗಳನ್ನೇ ಬದಲಿಸುತ್ತಾ
ಸಾಗಿದೆ ಈ ನವ ಜಗತ್ತು
ಇಲ್ಲಿ ಸತ್ಯ ಮಿತ್ಯಗಳ ಚರ್ಚೆ ಸಾಗಿಲ್ಲ ಮೂಢ
ವಾಸ್ತವತೆಯ
ಒಂದು ಮುಖದ ಅನಾವರಣ
ಮಾಡುವ ಪ್ರಯತ್ನವಷ್ಟೇ ತಂದೆ
-