ಜಗಕೆ ಮೂಲ ಭೂಮಿತಾಯಿ ಜನ್ಮಕೆ ಮೂಲ ಹೆತ್ತ ತಾಯಿ ಅನ್ನಕೆ ಮೂಲ ಧಾನ್ಯ ಲಕ್ಷ್ಮಿ ತಾಯಿ ವಿದ್ಯೆ ಕಲಿಯಲು ಬೇಕು ಸರಸ್ವತಿ ತಾಯಿ ದಾಹ ನೀಗಲು ಗಂಗಾ ಮಾತೆ ತಾಯಿ ರೋಗ ನಿವಾರಿಸಲು ಧನ್ವಂತರಿ ತಾಯಿ ಸಹೋದರಿ ಸತಿಯಾಗಿ ಬದುಕಲು ಜೊತೆಯಾಗಿ ಸತ್ತಮೇಲೂ ಮಡಿಲಲ್ಲಿ ಮಲಗಿಸಿ ಕೊಳ್ಳುವಳು ಭೂ ತಾಯಿ... ಹೀಗೆ ಹುಟ್ಟಿನಿಂದ ಸಾಯುವವರೆಗೂ ಮಹತ್ವದ ಹೆಜ್ಜೆಯನ್ನು ಇಡುವ ಸ್ತ್ರೀ ಕುಲಕೋಟಿಗೆ ನನ್ನ ಅನಂತ ಕೋಟಿ ಪ್ರಣಾಮಗಳು 🙏🙏🙏
ನೆಡೆಯೋಣ ಜೀವನದಲ್ಲಿ ತಗ್ಗಿ ಬಗ್ಗಿ ಕಲಿಯಬೇಕು ಸುಖ ಜೀವನದ ಮಗ್ಗಿ ನಲಿಯಬೇಕು ಎಲ್ಲರ ಮನ ಹಿಗ್ಗಿ
ಸೂರ್ಯದೇವನ ಚಲನೆ ಉತ್ತರಾಯಣ ನಮೋ ನಮೋ ಸೂರ್ಯ ನಾರಾಯಣ ಮನೆ ಮನಗಳಲ್ಲಿ ತುಂಬಲಿ ಸುಖ ಸಂತೋಷ ನೆಮ್ಮದಿಯ ವಾತಾವರಣ
ಎಳ್ಳು ಬೆಲ್ಲವ ಎಲ್ಲರೂ ಸವಿಯೋಣ ಜೀವನ ಸುಖ ದುಃಖದ ಮಿಶ್ರಣ ಸಿಹಿ ಕಹಿಯ ಅನುಭವದ ಸಮ್ಮಿಶ್ರಣ ಮಕರ ಜ್ಯೋತಿಯ ದರ್ಶನ ಪಡೆಯೋಣ
ನಾನು ನಾನೇ ಎಂಬುವದ ಮರೆಯೋಣ ಎಲ್ಲರ ಜೊತೆ ಸಂತೋಷದಿಂದ ಬೇರೆಯೋಣ ಹುಚ್ಚು ಜನರ ಸಹವಾಸ ಕಡಿಮೆ ಮಾಡೋಣ ಇಚ್ಛೆ ಉಳ್ಳವರ ಜೊತೆ ಸ್ವಚ್ಛ ಮನದಿಂದ ನಲಿಯೋಣ
ಬದುಕು ಎಂಬುವದು ಬಹು ಮುಖ್ಯ ನೋಡಣ್ಣ ಯಾರು ಎಲ್ಲಿಯವರೆಗೆ ನಗಬೇಕು ಪ್ರತಿ ಕ್ಷಣ ಕೆಲಸ ಮಾಡಲೇಬೇಕು ಪ್ರತಿದಿನ ಖಾಲಿ ಚಿಂತೆ ಬೇಡ ಬಂದದನ್ನು ಸ್ವೀಕರಿಸೋಣ ನಗುನಗುತ್ತಲೇ ಮುಗಿಯಲಿ ಸಾಗಲಿ ಸುಖ ಪಯಣ
ಮದವೇರಿದ ಮನುಜ ನಿನ್ನ ಸ್ವಾರ್ಥ ನಿಲುವಿಗೆ ಅಸುನೀಗಿದ ಅರ್ಜುನನೆಂಬ ಗಜ ಎಷ್ಟು ದಿನ ತೆಗೆದುಕೊಳ್ಳುವಿ ಮಜಾ ಪರ ಅತ್ಮವ ಕೊಂದ ಪಾಪ ಕೊಟ್ಟೆ ಕೊಡುವದು ಒಂದು ದಿನ ನಿನಗೆ ಸಜಾ ಎಲ್ಲಿ ಮುಳುಗಿದರು ಬಿಡುವದಿಲ್ಲ ಎಂತಹ ಪೂಜೆ ಮಾಡಿದರೇನು ಅಂತಹ ಪುಣ್ಯ ಕೋಟಿಯ ಆತ್ಮ ಎಷ್ಟು ನೊಂದಿರಬಹುದು ಊಹಿಸಲಸಾಧ್ಯ ಇಂತಹವರ ಮಧ್ಯ ಮತ್ತೆ ಸಿಲುಕದಿರು ಅರ್ಜುನ ಮತ್ತೆ ಹುಟ್ಟಿ ಬಾ ಪುಣ್ಯವಂತರ ಕಾಲದಲ್ಲಿ ಸತ್ಯಯುಗದ ಪ್ರಾರಂಭದಲ್ಲಿ...