Amar Gudge   (ಗುಡ್ಗೆಪೋರ)
1.2k Followers · 134 Following

read more
Joined 18 February 2020


read more
Joined 18 February 2020
10 HOURS AGO

ಕನಸಿನಲಿ ಕಾಡುತಿರುವ ನವನೀತ ಕಿನ್ನರಿ
ತಿಳಿಸದೇ ಹೃದಯ ಅಪಹರಿಸಿದ ಚೋರಿ
ಅನುರಾಗದ ಅಪಘಾತ ಮಾಡಿದ ಪೋರಿ
ಇಷ್ಟವಾಯಿತು ಸನ್ನಡತೆಯ ಬದುಕ ವೈಖರಿ

-


19 MAR AT 21:03

ಕರೆಯದೇ ಬಂದು
ಹೇಳದೇ ಹೊರಟಳು
ಇದರ ನಡುವೆ ಭಗ್ನವಾಯಿತು
ಬಡಪಾಯಿ ಕನಸು.

-


19 MAR AT 15:18

ನಾಯಕನ ಲಕ್ಷಣಗಳು
👉ಎದುರಾಗಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವುದು
👉ಚರ್ಚಿಸಿ ಚಿಂತಿಸಿ ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು
👉ದೂರದೃಷ್ಟಿಯುಳ್ಳವನು
👉ತನ್ನ ಗುಂಪಿನವರಿಗೆ ಒಳ್ಳೆಯ ವ್ಯವಸ್ಥೆ ಮಾಡಿ, ಅವರಿಂದ ಉತ್ತಮ ಕಾರ್ಯ ಮಾಡಿಸುವುದು
👉ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಲ್ಲರನ್ನೂ ಸಮಾನವಾಗಿ ಕಾಣುವುದು.
🔲ಇವು ಸರಿಯಾಗಿ ಇದ್ದರೇ ನಾಯಕತ್ವಕ್ಕೆ ಜಯ
ಉತ್ತಮವಾಗಿರುವುದ ತಂಡದ ಆರೋಗ್ಯ🔲

-


18 MAR AT 11:25

ಹಾಲಿನಂತ ಬಣ್ಣದ ರೂಪಕ್ಕೆ ಸೋತೆ
ಆಭರಣದಂತ ನಗುವಿಗೆ ನಾ ಶರಣು
ಬೆಣ್ಣೆಯ ತ್ವಚೆ ನೋಡಿ ನನ್ನೇ ಮರೆತೆ
ಸಪ್ತಸ್ವರದಂತ ಮಧುರ ಮಾತಿಗೆ ಬೆರಗು

-


15 MAR AT 22:00

ಉಸಿರಿಗೆ ಮುನಿಸು
ನಲ್ಮೆಯ ರಾಜನಿಗೆ ಮೂಡಿದೆ ಮುನಿಸು
ಕಾರಣವೆನೇಂದು ಮನಬಿಚ್ಚಿ ತಿಳಿಸು
ತಪ್ಪಾಗಿದ್ದರೆ ಪ್ರೀತಿಯ ಉಸಿರ ಮನ್ನಿಸು
ದೇಹ ಎರಡಾದರೂ ಒಂದಲ್ಲವೇ ನಮ್ಮ ಮನಸು
ಹಗಲಿರುಳು ಕಾಡುತ್ತಿದೆ ನಿನ್ನದೊಂದೇ ನೆನಪು
ಏಳೇಳು ಜನ್ಮದಲ್ಲೂ ಈ ಜೀವ ನಿನಗೆ ಮುಡಿಪು
ನೀನೊಬ್ಬನಿದ್ದರೇ ತನು ಮನಕೆ ಸದಾ ಹುರುಪು
ಕತ್ತಲು ಕವಿದ ಬದುಕಿಗೆ ನಿನ್ನಿಂದ ತಾರಾ ಹೊಳಪು

-


15 MAR AT 21:23

ಕೆಂಬಣ್ಣಕ್ಕೆ ತಿರುಗಿದ ಹೃದಯ
ನೆನಪಿನ ಮೂಟೆಯಿಂದ ಭಾರ
ಒಂಟಿತನದ ಬದುಕಿನ ಕಾಯ
ನಿಶ್ಚೇತ ಸಿಗದೇ ಪ್ರೇಮದಾಹಾರ

-


14 MAR AT 22:05

ಭೂತಕಾಲ ಇಂದು ಮತ್ತು ನಾಳೆಯನ್ನು ಸಮರ್ಥವಾಗಿ ರೂಪಿಸುತ್ತದೆ. ಉತ್ತಮ ಮಾರ್ಗದರ್ಶಕ. ಕಳೆದ ದಿನ ಅಥವಾ ಕ್ಷಣ ನೆನಪಿಸಿ ಇಂದು ಮತ್ತು ನಾಳೆಯನ್ನು ಜಾಗೃತಗೊಳಿಸುತ್ತದೆ.

-


12 MAR AT 13:55

ಮನುಷ್ಯ ತನ್ನ ನೋಯಿಸಿದವರ ಬಗ್ಗೆ, ತನಗೆ ಮೋಸ ಮಾಡಿದವರ ಬಗ್ಗೆ, ಅವಮಾನಿಸಿದವರ ಕುರಿತು, ಗೇಲಿಮಾಡಿದವವರ ನೆನೆದು ಕೊರಗುತ್ತಾ ಸೊರಗುತ್ತಾನೆ. ಆದರೇ ಒಮ್ಮೆ ಯೋಚಿಸಿ ಇದರಿಂದ ಏನಾದರೂ ಪ್ರಯೋಜನ ಇದೆಯಾ? ಲಾಭವಿದೆಯಾ ? ನೆಮ್ಮದಿ ಸಿಗುವುದೇ? ಇದಕ್ಕೆಲ್ಲಾ ಒಂದೇ ಉತ್ತರ ಇಲ್ಲಾ....
ಆದರೇ ಇವರಿಂದ ಕಲಿತ ಪಾಠವ ಗಮನಿಸಿ ಅರ್ಥೈಸಿಕೊಂಡು ಅನುಭವವೆಂಬ ಜ್ಞಾನ ಪಡೆದು ಮುನ್ನಡೆದರೇ ಗೆಲ್ಲುವೆ. ಮಿನುಗುವ ನಕ್ಷತ್ರವಾಗಿ ಎಲ್ಲರಿಗೂ ಚಿರಪರಿಚಿತನಾಗುವೆ, ಅವರೆಲ್ಲರೂ ಅಪರಿಚಿತರಾಗಿ ಬಾವಿಯ ಕಪ್ಪೆಯಾಗುವರು.

-


11 MAR AT 21:50

ನೋವು ನಮಗೆ ಮಾತ್ರ ಆಗುವುದಲ್ಲ, ಇತರರಿಗೂ ನಮ್ಮಂತೆಯೇ ನೋವಾಗುತ್ತದೆ ಎಂಬ ಅರಿವಿದ್ದವರು ಬೇರೆಯವರಿಗೆ ನೋವು ನೀಡುವುದಿಲ್ಲ.

-


11 MAR AT 19:53

ಬದುಕಿನ ಕೆಟ್ಟ ಕ್ಷಣ ನೋವನ್ನು ನಿಡಿದರೇ ನೋವು ಮಾರ್ಗವನ್ನು ಸೂಚಿಸುತ್ತದೆ. ನೋವಿನಿಂದ ದೊರೆಯುವ ದಾರಿಯೆಂಬ ಪಾಠವು ಬಾಳಿನ ಮೇಲೆ ಪರಿಣಾಮ ಬೀರಿ ಮನುಷ್ಯನನ್ನು ಬದಲಾಯಿಸುತ್ತದೆ. ಕೆಟ್ಟ ಕ್ಷಣವನ್ನು ಎದುರಿಸಿ ಸಕಾರಾತ್ಮಕ ಭಾವ ಬೆಳೆಸಿಕೊಂಡು ಪ್ರಗತಿಯ ಜೀವನ ನಡೆಸೋಣ.

-


Fetching Amar Gudge Quotes