ಶಾಂತಿಯು ಒತ್ತಡ, ಕೋಪ, ಹೆದರಿಕೆ, ಚಿಂತೆ ಮುಂತಾದ ನಕಾರಾತ್ಮಕ ಭಾವನೆಗಳಿಂದ ಮುಕ್ತವಾಗಿರುವ ಸ್ಥಿತಿಯು.
-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ಅಮರೋಕ್ತಿ
ವ್ಯರ್ಥವಾದ ಮಾತನಾಡುವವರು ಮತ್ತು ಬೇಕಾದ ಸಮಯಕ್ಕೆ ನೆರವಾಗದ ಜನರಿಂದ ದೂರವಿದ್ದಾಗ ನಿಜವಾದ ನೆಮ್ಮದಿ ಮತ್ತು ಬೆಳವಣಿಗೆ ಸಾಧ್ಯ.
ನಿನ್ನ ಶಾಂತಿ ಮತ್ತು ಏಳಿಗೆ ನಿನ್ನ ಆಯ್ಕೆಯಲ್ಲಿದೆ.-
ತುಂಬಾ ಬ್ಯುಸಿಯಾಗಿದ್ದಾಗಲೂ ನಿಮಗಾಗಿ ತನ್ನ ಅಮೂಲ್ಯ ಸಮಯವನ್ನು ಕೊಡುವವರನ್ನು ಗೌರವಿಸಿ,
ನಿಮ್ಮ ಕರೆಗೆ ಓಗೊಟ್ಟು ಬರುವವರನ್ನು ಅಂತರಾಳದಿಂದ ಪ್ರೀತಿಸಿ ಕೃತಜ್ಞತೆ ಸಲ್ಲಿಸಿ.-
ನೀನಿಲ್ಲದೆ ಬರಿದಾದ ಒಡಲು
ಉಕ್ಕುತ್ತಿದೆ ದುಃಖದ ಕಡಲು
ಮತ್ತೇರಿದೆ ನೆನಪಿನ ಅಮಲು
ಅನುಭವಿಸಿತಿಹೆ ಚೇತದಳಲು-
ಕೆಲಸ ಯಾವುದೇ ಇರಲಿ ಮಾಡುವ ಕೆಲಸವನ್ನು ಪ್ರೀತಿಸಿದರೇ ಅದರಿಂದಲೇ ನಿನ್ನ ಪ್ರಗತಿ
ಕಾರ್ಯದಲ್ಲಿ ಬರುವ ಸವಾಲನ್ನು ಅವಕಾಶವಾಗಿ ಪರಿವರ್ತಿಸುವ ಜಾಣ್ಮೆ ಇದ್ದರೇ ಅದರಿಂದ ನಿನಗೇ ಕೀರ್ತಿ
ಪ್ರಗತಿ ಕೀರ್ತಿಯೇ ಅಲ್ಲವೇ ಗೆಲುವಿನ ಪರ್ಯಾಯ....?-
ಮಾತಿನಲ್ಲಡಗಿದೆ ಅಗಾಧ ಶಕ್ತಿ
ಶಬ್ಧ ಬಳಕೆಯಲ್ಲಿರಲಿ ಯುಕ್ತಿ
ಸಕಾರಾತ್ಮಕ ಯೋಚನಾ ಪಂಕ್ತಿ
ನಿನ್ನ ಮಾಡುವುದು ಯಶಸ್ವಿ ವ್ಯಕ್ತಿ-
ಸೆಳೆಯಿತು ನಿನ್ನ ಚುರುಕಾದ ನಡವಳಿಕೆ
ಬೆಚ್ಚಗಾಯಿಸಿತು ಅನುರಾಗದ ಹೊದಿಕೆ
ಕೆಲ ದಿನದಗಳಲ್ಲೇ ಅರಿತೆ ನಿನ್ನ ಕುಮತಿ
ಕಪಟ ತಿಳಿದು ಛಿದ್ರವು ಒಲವಿನ ಸಂಗತಿ-
ಮನದಲಿ ಬಿತ್ತಿದ ಕಾಳಜಿಯ ಬೀಜ
ಅದರಿಂದ ಪ್ರೇಮಾಂಕುರವು ಸಹಜ
ಬೀಜವು ಭುವಿಯಲ್ಲೊಂದಾಗುವಂತೆ
ಮನಗಳ ಅನನ್ಯ ಅನುಬಂಧದ ಮಿಲನ-
ಬಾಳು ಒಂದು ಪಾಠಶಾಲೆ,
ಇಲ್ಲಿ ನೋವು ಗುರು, ಸುಖ ಪಾಠ,
ಅನುಭವವು ಫಲಿತಾಂಶ
ಕಷ್ಟ ಸುಖದ ದಾರಿಯಲ್ಲಿ ಸಾಗಲು
ಬೇಕಿದೆ ಅನುಭವದ ಬೆಳಕು-