ಇನ್ನೊಬ್ಬರನ್ನು ಕತ್ತಲಿನ ಕೂಪಕ್ಕೆ ತಳ್ಳಿ ಬೆಳಕಿನ ಹಾದಿಯಲ್ಲಿ ನಡೆಯುತ್ತಿದ್ದೇನೆ ಅಂದುಕೊಂಡು ಸಾಗಿದರೇ ಶಾಂತಿ ನೆಮ್ಮದಿಯಿರದ ಸೋಲಿನ ಪ್ರಪಾತದ ದರ್ಶನ ನಿನಗಾಗುವುದು.
-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ಮನುಷ್ಯರ ಬೆಂಬಲ ಕ್ಷಣಿಕ, ಕೈ ಬಿಡುವುದು ಸಹಜ
ಅದೃಶ್ಯವಾದ ದೈವದ ಕೈ ಅಸ್ತಿತ್ವದ ಆಳದಲ್ಲಿ ಸದಾ ನಿನ್ನನ್ನು ಹಿಡಿದಿದೆ. ತಾಳ್ಮೆ ಎನ್ನುವುದು ಕೇವಲ ಸಹನೆ ಅಲ್ಲ, ಅದು ನಂಬಿಕೆಯ ಮೂಲ ಮತ್ತು ಆತ್ಮಬಲದ ಆಧಾರ. ತಾಳ್ಮೆಯಿಂದಿರುವವನು ಜೀವನದ ಸೋಲು - ಗೆಲುವಿನ ಪರೀಕ್ಷೆಗಳನ್ನು ಎದುರಿಸಿ ನಿಜವಾದ ಗೆಲುವು ಎಂಬ ಫಲಿತಾಂಶದಿಂದ ಶಾಂತಿಯೆಂಬ ಪದವಿಯನ್ನು ಪಡೆದುಕೊಳ್ಳುತ್ತಾನೆ.-
ನೀ ಬಂದು ಬದುಕಿಗೆ ನೀಡಿದೆ ಹೊಸ ಅರ್ಥ
ನೀ ಸಿಕ್ಕಿ ನನ್ನಲ್ಲಿ ಅಳಿಸಿಹಾಕಿದೆ ಕೆಟ್ಟ ಸ್ವಾರ್ಥ
ನಿನ್ನಿಂದ ನನ್ನಲಿ ಉದ್ಭವಿಸಿದೆ ನವ್ಯ ಸ್ಪೂರ್ತಿ
ನಿನ್ನ ಸಹಯೋಗದಿಂದ ಜೀವನದಲಿ ಕೀರ್ತಿ-
ಆತುರದ ನಿರ್ಧಾರಗಳು ನಿರ್ನಾಮ ಮಾಡಬಹುದು, ಜೀವನದಲ್ಲಿ ಸುಂದರ ವಿಷಯಗಳು ನಿಧಾನವಾಗಿ ಬರುತ್ತವೆ. ತಾಳ್ಮೆಯಿಂದ ಕಾಯಿರಿ, ವಿಚಾರ ಮಾಡಿ, ಆಗ ನಿಮ್ಮ ಬದುಕು ಹೂವಾಗಿ ಅರಳುತ್ತದೆ.
-
ಕಳೆದ ಬಂಧ ವಸ್ತುಗಳಲಿ ಸ್ಮರಣ
ಪ್ರೀತಿಯಲಿ ಕಳೆದ ಕ್ಷಣ ಸಪ್ರಾಣ
ಮುರಿದ ಪ್ರೇಮದಿಂದತಂತ್ರ ಭಾವ
ಕ್ಷೇಮವೆನಿಸಿದೆ ಬದುಕಲಿ ನೀರವ-
ಒಲವಿನ ಮನೋಭಾವ
ಸ್ಪಟಿಕದಂತಹ ಸ್ವಭಾವ
ಸನ್ನಡೆತೆಯಿಂದ ಸೆಳೆಯುವವ
ಚಿತ್ತವ ಅಪಹರಿಸಿದ ಚೆಲುವ-
ಸಂತೋಷ ಆಂತರಿಕ ಶಾಂತಿ ಸಮಾಧಾನ ನೆಮ್ಮದಿಯಿಂದ ಸಿಗುವುದು. ಇವು ಸಿಗಬೇಕಾದರೇ ಸಕಾರಾತ್ಮಕ ಯೋಚನೆ, ಆತ್ಮವಿಶ್ವಾಸ, ಮತ್ತು ಧ್ಯಾನ ಮಾಡಬೇಕು.
-
ಕಣ್ಣೀರು ಬರುವುದಕೆ ಕಾರಣ ಅವಮಾನ
ಸಂಬಂಧ ಕೆಡಲು ಕಾರಣವು ಅನುಮಾನ
ಪರಿಸ್ಥಿತಿ ಬದಲಿಸಲು ಮುಖ್ಯ ಸುದೃಢ ಮನ
ನಾನು ಬದಲಾಗಲು ಬೇಕಿದೆ ಸ್ವಾಭಿಮಾನ-
ರಾಖಿಯ ಈ ದಾರವು ನಮ್ಮ ನಡುವಿನ
ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಸಂಕೇತ
ನಗುವಿಗೂ ಅಳುವಿಗೂ ಸಾಕ್ಷಿಯಾಗಿರುವ
ಮಧುರವಾದ ನಮ್ಮಿಬ್ಬರ ಅನುಬಂಧ ಶಾಶ್ವತ-
ನಿನ್ನ ನಗುವೇ ನನ್ನ ಬದುಕಿಗೆ ಬಲ
ಬೆಲೆಕಟ್ಟಲಾಗದ ನಿಧಿ ನೀ ಅಮೂಲ್ಯ
ದೇಹ ದೂರವಿದ್ದರೂ ಬಂಧ ಪ್ರಬಲ
ಅಕ್ಕ/ತಂಗಿಗೆ ಈ ಸುದಿನದ ಶುಭಾಶಯ-