ಕನಸಿನಲಿ ಕಾಡುತಿರುವ ನವನೀತ ಕಿನ್ನರಿ
ತಿಳಿಸದೇ ಹೃದಯ ಅಪಹರಿಸಿದ ಚೋರಿ
ಅನುರಾಗದ ಅಪಘಾತ ಮಾಡಿದ ಪೋರಿ
ಇಷ್ಟವಾಯಿತು ಸನ್ನಡತೆಯ ಬದುಕ ವೈಖರಿ-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ನಾಯಕನ ಲಕ್ಷಣಗಳು
👉ಎದುರಾಗಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವುದು
👉ಚರ್ಚಿಸಿ ಚಿಂತಿಸಿ ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು
👉ದೂರದೃಷ್ಟಿಯುಳ್ಳವನು
👉ತನ್ನ ಗುಂಪಿನವರಿಗೆ ಒಳ್ಳೆಯ ವ್ಯವಸ್ಥೆ ಮಾಡಿ, ಅವರಿಂದ ಉತ್ತಮ ಕಾರ್ಯ ಮಾಡಿಸುವುದು
👉ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಲ್ಲರನ್ನೂ ಸಮಾನವಾಗಿ ಕಾಣುವುದು.
🔲ಇವು ಸರಿಯಾಗಿ ಇದ್ದರೇ ನಾಯಕತ್ವಕ್ಕೆ ಜಯ
ಉತ್ತಮವಾಗಿರುವುದ ತಂಡದ ಆರೋಗ್ಯ🔲-
ಹಾಲಿನಂತ ಬಣ್ಣದ ರೂಪಕ್ಕೆ ಸೋತೆ
ಆಭರಣದಂತ ನಗುವಿಗೆ ನಾ ಶರಣು
ಬೆಣ್ಣೆಯ ತ್ವಚೆ ನೋಡಿ ನನ್ನೇ ಮರೆತೆ
ಸಪ್ತಸ್ವರದಂತ ಮಧುರ ಮಾತಿಗೆ ಬೆರಗು
-
ಉಸಿರಿಗೆ ಮುನಿಸು
ನಲ್ಮೆಯ ರಾಜನಿಗೆ ಮೂಡಿದೆ ಮುನಿಸು
ಕಾರಣವೆನೇಂದು ಮನಬಿಚ್ಚಿ ತಿಳಿಸು
ತಪ್ಪಾಗಿದ್ದರೆ ಪ್ರೀತಿಯ ಉಸಿರ ಮನ್ನಿಸು
ದೇಹ ಎರಡಾದರೂ ಒಂದಲ್ಲವೇ ನಮ್ಮ ಮನಸು
ಹಗಲಿರುಳು ಕಾಡುತ್ತಿದೆ ನಿನ್ನದೊಂದೇ ನೆನಪು
ಏಳೇಳು ಜನ್ಮದಲ್ಲೂ ಈ ಜೀವ ನಿನಗೆ ಮುಡಿಪು
ನೀನೊಬ್ಬನಿದ್ದರೇ ತನು ಮನಕೆ ಸದಾ ಹುರುಪು
ಕತ್ತಲು ಕವಿದ ಬದುಕಿಗೆ ನಿನ್ನಿಂದ ತಾರಾ ಹೊಳಪು-
ಕೆಂಬಣ್ಣಕ್ಕೆ ತಿರುಗಿದ ಹೃದಯ
ನೆನಪಿನ ಮೂಟೆಯಿಂದ ಭಾರ
ಒಂಟಿತನದ ಬದುಕಿನ ಕಾಯ
ನಿಶ್ಚೇತ ಸಿಗದೇ ಪ್ರೇಮದಾಹಾರ-
ಭೂತಕಾಲ ಇಂದು ಮತ್ತು ನಾಳೆಯನ್ನು ಸಮರ್ಥವಾಗಿ ರೂಪಿಸುತ್ತದೆ. ಉತ್ತಮ ಮಾರ್ಗದರ್ಶಕ. ಕಳೆದ ದಿನ ಅಥವಾ ಕ್ಷಣ ನೆನಪಿಸಿ ಇಂದು ಮತ್ತು ನಾಳೆಯನ್ನು ಜಾಗೃತಗೊಳಿಸುತ್ತದೆ.
-
ಮನುಷ್ಯ ತನ್ನ ನೋಯಿಸಿದವರ ಬಗ್ಗೆ, ತನಗೆ ಮೋಸ ಮಾಡಿದವರ ಬಗ್ಗೆ, ಅವಮಾನಿಸಿದವರ ಕುರಿತು, ಗೇಲಿಮಾಡಿದವವರ ನೆನೆದು ಕೊರಗುತ್ತಾ ಸೊರಗುತ್ತಾನೆ. ಆದರೇ ಒಮ್ಮೆ ಯೋಚಿಸಿ ಇದರಿಂದ ಏನಾದರೂ ಪ್ರಯೋಜನ ಇದೆಯಾ? ಲಾಭವಿದೆಯಾ ? ನೆಮ್ಮದಿ ಸಿಗುವುದೇ? ಇದಕ್ಕೆಲ್ಲಾ ಒಂದೇ ಉತ್ತರ ಇಲ್ಲಾ....
ಆದರೇ ಇವರಿಂದ ಕಲಿತ ಪಾಠವ ಗಮನಿಸಿ ಅರ್ಥೈಸಿಕೊಂಡು ಅನುಭವವೆಂಬ ಜ್ಞಾನ ಪಡೆದು ಮುನ್ನಡೆದರೇ ಗೆಲ್ಲುವೆ. ಮಿನುಗುವ ನಕ್ಷತ್ರವಾಗಿ ಎಲ್ಲರಿಗೂ ಚಿರಪರಿಚಿತನಾಗುವೆ, ಅವರೆಲ್ಲರೂ ಅಪರಿಚಿತರಾಗಿ ಬಾವಿಯ ಕಪ್ಪೆಯಾಗುವರು.-
ನೋವು ನಮಗೆ ಮಾತ್ರ ಆಗುವುದಲ್ಲ, ಇತರರಿಗೂ ನಮ್ಮಂತೆಯೇ ನೋವಾಗುತ್ತದೆ ಎಂಬ ಅರಿವಿದ್ದವರು ಬೇರೆಯವರಿಗೆ ನೋವು ನೀಡುವುದಿಲ್ಲ.
-
ಬದುಕಿನ ಕೆಟ್ಟ ಕ್ಷಣ ನೋವನ್ನು ನಿಡಿದರೇ ನೋವು ಮಾರ್ಗವನ್ನು ಸೂಚಿಸುತ್ತದೆ. ನೋವಿನಿಂದ ದೊರೆಯುವ ದಾರಿಯೆಂಬ ಪಾಠವು ಬಾಳಿನ ಮೇಲೆ ಪರಿಣಾಮ ಬೀರಿ ಮನುಷ್ಯನನ್ನು ಬದಲಾಯಿಸುತ್ತದೆ. ಕೆಟ್ಟ ಕ್ಷಣವನ್ನು ಎದುರಿಸಿ ಸಕಾರಾತ್ಮಕ ಭಾವ ಬೆಳೆಸಿಕೊಂಡು ಪ್ರಗತಿಯ ಜೀವನ ನಡೆಸೋಣ.
-