ಸಿರಿತನ ಬಡತನದಲ್ಲೂ ನೆರಳಾಗಿರುವೆ
ಒಲವ ಬದುಕಿಗೆ ಹಾಲು ಸಕ್ಕರೆ ಆಗುವೆ
ಬಾಳಿನ ಸ್ವರಕೆ ಹಿತವಾದ ಶ್ರುತಿಯಾಗುವೆ
ಕಷ್ಟ ಸುಖದಲಿ ಆತ್ಮೀಯ ಸಖನಾಗಿರುವೆ-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ನನ್ನ ಎದೆಯಲ್ಲಿ ಹಚ್ಚಿರುವೆ ಭಾವಹಣತೆ
ಮನದಲಿ ಮೂಡಿಸಿರುವೆ ನೆನಪಿನ ಚಿಂತೆ
ಅಂತರಾಳದಿ ಚಿಮ್ಮುತಿದೆ ನಿನ್ನೊಲವ ಒರತೆ
ನಿನ್ನ ಕಂಡಾಗಿಂದ ದೂರಾಯಿತೆಲ್ಲಾ ಕೊರತೆ-
ಲತೆಯಂತೆ ಬಳುಕುವ ವಯ್ಯಾರ
ನಡೆದರೇ ನರ್ತಿಸುವ ಮಯೂರ
ನಯನವೇ ಕೋಮಲ ಮಂದಾರ
ನಿನ್ನಯ ನುಡಿಯೇ ಮುತ್ತಿನ ಹಾರ-
Amarokti
ಮನದಲ್ಲಿರುವುದನ್ನು ಮಾತಿನಲ್ಲಿ ಹೇಳದೇ ಕಾರ್ಯದ ಮೂಲಕ ಮಾಡಿದವನು ಸಾಧಕನಾಗುತ್ತಾನೆ.
ಆದರೆ ಮನದ ಮಾತು ಹೊರಹಾಕಿದವನು ಬಾಧೆಗೆ ಒಳಗಾಗುತ್ತಾನೆ.
ಮಾತು ಕಡಿಮೆ ಮಾಡಿ, ಕಾರ್ಯ ಹೆಚ್ಚು ಮಾಡಿ. ನಿನ್ನ ಸಾಧನೆ ಮಾತನಾಡಲಿ."-
ಅಮರೋಕ್ತಿ
ವಿಫಲತೆಯೇ ಅಂತಿಮವಲ್ಲ ಅದು ಯಶಸ್ಸಿನ ಆರಂಭ
ವಿಫಲವಾದೆನೆಂದು ಕೈಚೆಲ್ಲಿ ಕೂತವರು ಇತಿಹಾಸ ಬರೆದಿಲ್ಲ, ಸೋತರೂ ಛಲಬಿಡದೆ ಗೆಲುವಿಗೆ ಹೆಜ್ಜೆ ಹಾಕಿದವರೇ ಇತಿಹಾಸ ನಿರ್ಮಿಸಿದವರು.-
ದೇಹದ ಆರೋಗ್ಯಕ್ಕೆ ಆಹಾರ ಮತ್ತು ಜೀವನಶೈಲಿಗಳು ಮಾತ್ರ ಕಾರಣವಲ್ಲ ಇದಕ್ಕಿಂತ ಮುಖ್ಯವಾದದ್ದು ಮನಸು, ಮನಸ್ಸು ಶಾಂತವಾಗಿದ್ದಷ್ಟೂ ದೇಹ ಆರೋಗ್ಯವಾಗಿರುತ್ತದೆ. ಪ್ರೀತಿ ಸಹನೆಯನ್ನು ರೂಢಿಸಿಕೊಂಡಾಗ ಶಾಂತಿ ಸಮಾಧಾನ ನಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ. ವರ್ತಮಾನದಲ್ಲಿ ಜೀವಿಸಿ ಈ ಕ್ಷಣವು ಬದುಕಿನ ಅತ್ಯಮೂಲ್ಯ ಉಡುಗೊರೆಯೆಂದುಕೊಂಡು ಪ್ರಾಮಾಣಿಕವಾಗಿ ಬದುಕಿದಾಗ ಸ್ವಾಸ್ಥ್ಯ ಮನಸ್ಸು ಮತ್ತು ದೇಹದೊಂದಿಗೆ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯ.
-
ನೀ ಸನಿಹ ಬಂದಾಗ ಹೊಸ ಸಂಚಲನ
ದಿಟ್ಟಿಸಿ ನೋಡಿದಾಗ ರೋಮಾಂಚನ
ಎದೆಗೆ ಒರಗಿದಾಗ ಹಿತವಾದ ಸ್ಪಂದನ
ಸ್ಪರ್ಶದ ಹರ್ಷದಿಂದ ಸಾರ್ಥಕ ಜೀವನ-