ಒಂಟಿಯ ಬಾಳು ಬಾಡಿದೆ
ಸಿಗದೇ ಅಮೃತದ ಒಲುಮೆ
ಬರಡಾದ ಬದುಕಿಗೆ ಅವಳ
ಆಗಮನ ಚೈತನ್ಯದ ಚಿಲುಮೆ-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
"ನಮ್ಮ ನಗುವಿನಿಂದ ಜಗತ್ತನ್ನು ಜೀವನವನ್ನು ಸುಂದರಗೊಳಿಸಿ, ಏಕೆಂದರೆ ಅದು ಎಲ್ಲರ ಮನಸ್ಸನ್ನು ಗೆಲ್ಲುವ ಶಕ್ತಿಯನ್ನು ಹೊಂದಿದೆ."
ರವೀಂದ್ರನಾಥ ಟಾಗೋರ್-
ದೇವರ ಬಳಿ ಸುಖ ಸಂಪತ್ತು ಕೊಡೆಂದು ಪ್ರಾರ್ಥಿಸಿಕೊಳ್ಳದೇ ಕಷ್ಟ ಎದುರಿಸುವ ಶಕ್ತಿ ಸಂಪತ್ತು ಗಳಿಸುವ ಸಾಮರ್ಥ್ಯ ನೀಡೆಂದು ಕೇಳಿಕೊಂಡಾಗ ಭಗವಂತ ದಯಪಾಲಿಸುತ್ತಾನೆ.
-
ಸೋಪಾನದ ಮೇಲೆ
ಕುಳಿತು ಇನಿಯನ ನಿರೀಕ್ಷೆ
ಚಿತ್ತದಲಿ ಮಾಡುತಿಹಳು
ಕಳೆದ ಕ್ಷಣಗಳ ಸಮೀಕ್ಷೆ
ಮೂಡಿದ ಮಂದಹಾಸಕೆ
ಕಾರಣ ನಲ್ಲನಾಗಮನ
ದಾರಿಯ ನೋಡುತಿಹುದು
ಕಾತುರದಿಂದ ನಯನ-
ನನ್ನದೆಂಬ ಭ್ರಮೆಯಲ್ಲಿದ್ದಾಗ ಜಗಕ್ಕೆ ಬರುವಾಗ ಹೋಗುವಾಗ ಒಂಟಿ ಎಂಬುದನ್ನು ಮರೆತಿರುತ್ತದೆ, ಆದರೇ ಇದು ಭಗವಂತನ ಮನೆ, ನಾವೆಲ್ಲರೂ ಅವನ ಮಕ್ಕಳೆಂದು ಅರಿತಾಗ ನನ್ನಲ್ಲಿರುವುದು ಶಾಶ್ವತ ಅಲ್ಲ ಎಂಬ ಸತ್ಯ ತಿಳಿದು ಜ್ಞಾನಿಯಾಗುವೆ.
-
ಜ್ಞಾನದ ಬೆಳಕಿನ ಹಾದಿಯು ಪುಸ್ತಕ
ವಿಧೇಯತೆಯಿಂದ ಶೋಭೆ ಮಸ್ತಕ
ಪರಿಸ್ಥಿತಿ ನಿಭಾಯಿಸುವುದು ವಿವೇಕ
ಬದುಕಲಿ ಆದರ್ಶ ವ್ಯಕ್ತಿತ್ವದ ಪ್ರತೀಕ-
ಕೇಳಲು ಆಪ್ಯಾಯಮಾನವಾಗಿ ಕಡಿಮೆ ಆಯಸ್ಸನ್ನು ಹೊಂದಿ ಅಪಾಯಕ್ಕೆ ದೂಡುವುದೇ ದುಷ್ಟವಾದ ಸುಳ್ಳು
-
ಬದುಕು ಎಂಬುದು ಕ್ಷಣಿಕ ಕಾಲೇಳ್ಯೋಕೂ ಕಾಲ ಹಿಡ್ಯೋಕೂ ಸಮಯವಿಲ್ಲ ಯಾರ್ಯಾರಿಗೋ ಸಲಾಮು ಹೋಡಿತಾ ಯಾರ್ಯಾರಿಗೋ ಮುಲಾಮು ಹಚ್ಚುತ್ತಾ ಅವರಿವರನ್ನು ಖುಷಿ ಪಡಿಸುತ್ತಾ ಇರುವ ಬದಲು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ನನ್ನ ಮನಸ್ಸಿನ ಮಾತನ್ನು ಕೇಳಿ ನನಗೆ ನಾನೇ ವಿಶ್ವಾಸ ತುಂಬಿ ನನ್ನನ್ನೇ ನಂಬಿ ನಡೆದರೇ ಅದೇ ನನ್ನ ಸಂತೋಷದ ಜೀವನ ಎಂದು ಅರಿತಾಗ ನಿರಾಳತೆ ಅಪ್ಪುತ್ತದೆ.
-
ಭರದಿಂದ ಸಾಗುವ ಬಾಂದಳದ ಬಾನಾಡಿ
ದುಗುಡ ದೂರಾಗುವುದು ಇದನ್ನ ನೋಡಿ
ಪ್ರಭಾತದಲಿ ಪ್ರಭಾಕರನ ಭೇಟಿಗೆ ಪಯಣ
ಚಿಲಿಪಿಲಿ ನಾದವ ಆಲಿಸಿ ರೋಮಾಂಚನ-
ನೋವ ಮರೆಸುವ ಮಧುರ ಪಿಸು ಮಾತು
ನಿರ್ಜೀವ ಮನಕೆ ನಿನ್ನೊಲವು ಸಂಜೀವಿನಿ
ಒಂಟಿತನಕೆ ಜೊತೆಗಾರ ನೀನಾದರೆ ಒಳಿತು
ಅರಿಯದಾದೆಯಾ ಇನಿಯ ಮನದ ಧ್ವನಿ ?-