ಅರೇ...! ಅದೆಷ್ಟು ಬಾರಿ ಉಸಿರನ್ನೀಯಬೇಕು?
ಕಿಡಿಯೊಂದ ಜ್ವಾಲೆಯಾಗುರಿಸಲು
#ಎನ್ನೆದೆಯ_ಶ್ವಾಸ
|
ಹಾಗಿದ್ದ ಮೇಲೆ ಅಪ್ಪ...?
ಕಡಲೊಡಲಾಳದಷ್ಟೇ ಬೆವರಹನಿಗಳ ಬಸಿದಿಹರು
ಪರಮಾತ್ಮನಾಗಿಯೇ ಉಳಿಯಲು!
#ನನ್ನುಸಿರಿನ_ಶ್ವಾಸ-
ಸಂಗೀತ ಪ್ರಿಯೆ🍁
ನೆಮ್ಮದಿಯ ಉಸಿರು ! ಆರಾಧ್ಯ ಶಿವನ ಹೆಸರು💙 #ಶಿವಧ್ಯಾನಿ
ಲತೆಯ ಚಿಗುರೊಂ... read more
ನಾ ನಿನ್ನೊಳಗಿಳಿದದ್ದೇ ಪ್ರೇಮಿಸಲೆಂದು;
ತಾಜಾ ಭಾವಗಳ ಜೀವಿಸಲೆಂದೇ!
ಕೇವಲ ಒಡನಾಡಿಯಾಗುತ್ತೀಯ ಎಂದಲ್ಲ;
ನರನಾಡಿಯಲ್ಲೂ ಮಿಡಿಯಲೆಂದೇ!
#ಪುಸ್ತಕ_'ಪ್ರೇಮ'-
ನೋಡುತ್ತಿದ್ದೇನೆ ಸಖಿ;
ಜೊತೆಯಲ್ಲೇ ಇದ್ದು ಕಿಚ್ಚು ಹಚ್ಚಿ ಎದ್ದು ಹೋಗಿ
ಸಭ್ಯರಂತೆ ನಟಿಸುತ್ತಿರುವವರ ದೊಂಬರಾಟವ
ಕೇಳುತ್ತಿದ್ದೇನೆ ಸಖಿ;
ಇದಿರಿನಲಿ ನಯವಾಗಿ ಅತಿಶ್ಲಾಘನೆಯ ಲೇಪ ಸವರಿ
ಬೆನ್ಹಿಂದೆ ಟೀಕಿಸುತ್ತಿರುವ ದುರುಳರ ಕಟು ಅಪಹಾಸ್ಯವ
ಹೇಳುತ್ತಿದ್ದೇನೆ ಸಖಿ;
ಪುನಃ ಹತೋಟಿಗೆ ತರಬಹುದು ಮತಿಗೆಟ್ಟ ಚಿತ್ತವ
ಆದರೆ ಕೊಂಕಾಡುವ ಜಿಹ್ವೆಗೆ ಲಗಾಮು ಹಾಕಲು ಸಾಧ್ಯವಾ?-
ತಲ್ಲಣಗೊಂಡಿದ್ದು ಎಂದುಕೊಂಡೆ
ಸುಳಿ ಎದ್ದಿದ್ದರ ಸುಳಿವೇ ಸಿಕ್ಕಿರಲಿಲ್ಲ
ಓಡುವ ನದಿಯಲ್ಲೂ; ಓದಲಾಗದ ಮನದಲ್ಲೂ!-
ಕೊನೆಗೊಳ್ಳುವ ಭಾವಗಳಿಗೆ 'ಸಂತಾಪ'
ಸೂಚಿಸುತ್ತಲೇ ಇರುತ್ತೇನೆ ಗಾಲಿಬ್!
ಪ್ರತಿಯಾಗಿ, ಋತುಮಾನ ಬದಲಾದರೂ ಲಗ್ಗೆ ಇಡುವ
ಜಡಿಮಳೆಯಂತೆ ಆಗಾಗ್ಗೆ ರಚ್ಚೆ ಹಿಡಿಯುವುದುಂಟು;
ಆಂತರ್ಯದೊಡಲ ಸಂದಿಯಲ್ಲಿ ಅವಿತು
ಕೊನೆಗಾಣಲು ಬಯಸದೇ ಕಾಟ ಕೊಟ್ಟಿದ್ದೂ ಉಂಟು!-
ಕೆಡುಕ ಬಯಸಿ ಕೆಡವಲು ಕಾಯುತಲಿರುವರಯ್ಯಾ ಏಳಿಗೆಯ ಹಾದಿಯಲ್ಲಿ
ಮತ್ತೆ ಸೆಟೆದು ನಿಂತು ತಾಳ್ಮೆಯ ಅನುಕರಿಸಿ ನಡೆಯುತಲಿರಬೇಕು;
ಹೊಸೆದು ಹಾಕಿದಷ್ಟು ಬಲೆ ಹೆಣೆವ ನೈಪುಣ್ಯತೆಯಿರುವ ಶಲದಿಯ ಹಾಗೆ!-
ತೆರೆದು ಓದಲೇಬೇಕೆನ್ನುವ ಕಾದಂಬರಿ ನೀನು;
ಹಾಗೆ ಮಡಚಿಟ್ಟರಂತೂ ಕೌತುಕವೆನಿಸಿ
ಅಗಾಧವಾಗಿ ಕಾಡುವ ಆಹ್ಲಾದ ಭಾವ ನೀನು!-
ಇಷ್ಟಪಟ್ಟ ವಸ್ತುಗಳಿಗೆ ಯೋಚಿಸುವ ಗುಂಗಿಗೂ ಹೋಗದೆ
ಅನಿಯಮಿತವಾಗಿ ಖರ್ಚು ಮಾಡುವ ಹಾಗೆ
ಭಾವನೆಗಳಿಗೂ ಇಂತಿಷ್ಟು ವ್ಯಯಿಸಿ ಖರೀದಿಸುವಂತಿದ್ದರೆ
ಯಾವ ಮನಸ್ಸೂ ಬರಿದಾಗುಳಿಯುತ್ತಿರಲಿಲ್ಲ ಗಾಲಿಬ್!-
ಸಾವು ಅಂದ್ರೆ ಭಯ ಇಲ್ಲ ಗಾಲಿಬ್!
ಆತ್ಮೀಯರು ವಾಸ್ತವದಿಂದ ಅದೃಶ್ಯರಾದಾಗ
ಎದೆಯೊಳಗಿನ ಸಣ್ಣ ಕಂಪನ ನಡುಕ ತರಿಸುತ್ತೆ;
ಜೀವ ಹಿಂಡುವ ತಾಜಾ ನೆನಹುಗಳ ಕುರುಹುಗಳು
ಮತ್ತೆ ಮತ್ತೆ ಉಲ್ಬಣಿಸುತ್ತೆ ಅಷ್ಟೇ-ಅಷ್ಟೇ!-