ನೆನಪುಗಳ ಹಿಂದೆ ಓಡೋ ಮನಸ್ಸು
ಮನುಜನ ಮಾತು ಕೇಳಿತೇ
ಮಾತುಗಳ ಮೌನಕ್ಕೆ ಸುಮ್ಮನೆ ಕೂತ ಮಾನವ
ಹೃದಯದ ಭಾಷೆಯ ಅರಿಯಬಹುದೇ
ಮನಸಿನ ನೆನಪಿನ ಅಲೆಯ ಸದ್ದಿಗೆ
ತಣ್ಣನೆ ಸ್ಥಬ್ದನಾದ ಮಾನವ-
ನೆನಪಿನ ನಾವೆ
ನೆನಪಿನ ನಾವೆ ನೀರ ಸೀಳಿ ಮುಂದಕ್ಕೆ ಸಾಗುತ್ತಿರಲು
ಮಳೆಯು ರಪ ರಪನೆ ಸುರಿಯುತಿತ್ತು..
ಗುಡುಗು ಸಿಡಿಲುಗಳ ಆರ್ಭಟಕ್ಕೆ
ಮೇಲಿಂದ ಮೇಲೆ ಮುಳುಗಿಸಲು ನೀರಿನ ಅಲೆ
ಸುಳಿಗಾಳಿ ಸೆಳೆಯುತ್ತಿತ್ತು
ಮುಳುಗುವೆನೋ ತೇಲುವನೋ ತಿಳಿಯದ ನಾವಿಕ
ದಡವ ಸೇರಲು ತವಕಿಸಿದ್ದ ಉಸಿರು ಬಿಗಿ ಹಿಡಿದು.
-
ನೀರವ ಮೌನ
ಧೂಳಿಪಟ ಮಾಡಿದ್ದ ಮೃತ್ಯುಂಜಯ ಪಾರ್ಥನಾ ಸೈನ್ಯವ
ಕೊನೆಯ ಗಳಿಗೆಯಲ್ಲಿ ಧರಶಾಯಿಯಾಗಿದ್ದ..
ಗೆದ್ದೆನೆಂದು ಘರ್ಜಿಸುತ್ತಿದ್ದ ಪಾರ್ಥ ಕೊನೆಗೂ
ಮೃತ್ಯುಂಜಯನ ಕೊನೆಯ ಉಸಿರಿನ ತುಸು ನಗೆಗೆ
ನಿಂತಲ್ಲೆ ಧರೆಗೆ ಕುಸಿದಿದ್ದ ವಾಸುದೇವ ನೊಡಗೂಡಿ
ಅಲ್ಲಿ ಕೊನೆಗೂ ಆವರಿಸಿತ್ತು ನೀರವ ಮೌನ...
-
ಭರ್ರ್ ಎಂದು ಬೀಸುವ ಗಾಳಿಯ ಸದ್ದಿಗೆ...
ಸುಮ್ಮನೆ ಕೂತು ಸುಮ್ಮನಿರಲಾರದ ಮೌನಕ್ಕೆ
ಮತ್ತೇ ದಡ ಸೇರುವ ಅಲೆಗಳ ಆರ್ಭಟಕ್ಕೆ..
ಕಾಲ್ಪನಿಕ ಲೋಕದ ಮಾಯಾ ಲೋಕ ಎಂಬ
ಮಾಯ ನಗರಿಯಲ್ಲಿ ಕಳೆದು ಹೋಗಿದ್ದನಾತ....-
ಅಂತೆಕಂತೆಗಳ ನಡುವೆ ಜನರಿಗೆ ಇತರರ ವಿಷಯದ ಚಿಂತೆ
ಮತ್ತೆ ಮತ್ತೆ ಆಲೋಚಿಸುವರು ಕಪಟ ತಿವಿಕ್ರಮನಂತೆ
ಬೆನ್ನು ಬಿಡದೆ ಮತ್ತೆ ಬೆನ್ನ ಹಿಂದೆ ಬರುವರು ಬೇತಾಳನಂತೆ
ನಟಿಸುವರು ಎದುರಲ್ಲಿ ಬಂದಾಗ ಬಣ್ಣದ ಚಿಟ್ಟೆಯಂತೆ
ಆಲೋಚನೆ ಮಾಡದೇ ಬಾರದು ಇವರಿಗೆ ನಿದ್ರೆಯ ಸಂತೆ....-
ನೆನಪಿನ ದೋಣಿಯಲ್ಲಿ ನಾವಿಕನ ಪಯಣ
ಮತ್ತೇ ಮತ್ತೆ ನೆನೆಪುಗಳ ಅಲೆಗೆ ಸಿಕ್ಕ ದೋಣಿ
ಮುಳುಗುವುದೋ ಅಥವಾ ಮತ್ತೆ ತೇಲುವುದೋ
ಎಂದು ತಿಳಿಯುವಾಗ ನೆನೆಪಿನ ದೋಣಿ ಮತ್ತೇ ಮುಂದಕ್ಕೆ ಸಾಗಿತ್ತು....-
ಸಂಜೆಯ ಸಮಯದಿ ನೇಸರನು ಮರೆಯಾಗುತ್ತಿರಲು...
ತಿಳಿಗಾಳಿಯೂ ಮೈಯ ಮೆಲ್ಲನೇ ಸೋಕಿ ಸರಿದಿದೆ...
ಚಿಟಪಟ ಹಕ್ಕಿಗಳು ಮರಳಿ ಗೂಡಿಗೇ ಸೇರ ಬಯಸಿವೆ.
ನಿಸರ್ಗ ಸೌಂದರ್ಯದ ಮುಂದೆ ಮನುಷ್ಯನ ಅಂದ ಶೂನ್ಯಾವಾಗೀದೆ...
-
ಮತ್ತೆ ಮಳೆ ಮೆಲ್ಲನೆ ಬರುತ್ತಾಲಿದೆ...
ತಣ್ಣನೇಯ ಗಾಳಿ ಮೈ ಸವರಿ ಸರಿಯುತಿದೆ....
ಆಗೊಮ್ಮೆ ಇಗೊಮ್ಮೆ ಗುಡುಗುವ ಗುಡುಗು....
ಮತ್ತೆ ಮತ್ತೆ ಮಿಂಚಿ ಮಾಯಾವಾಗೋ ಮಿಂಚು...
ಹಾಗೆ ಮನಸಿನಲ್ಲಿ ನೆನಪಿನ ಸಾಗರದಲ್ಲಿ....
ತೇಲಿ ಬರುತ್ತಾಲಿದೆ ತಣ್ಣನೆಯ ನೆನಪು......
-