TULASI NAVEEN 🌦   (©Writer Sindhu Bhargava)
2.3k Followers · 2.1k Following

read more
Joined 16 June 2018


read more
Joined 16 June 2018
5 HOURS AGO

ಅಧಿಕಾರ- ಜವಾಬ್ದಾರಿ

ಜವಾಬ್ದಾರಿ ಇರುವವರು ತಮ್ಮ ಕೆಲಸ‌ ತಾವೇ ಮಾಡುವರು.
ಅಥವಾ ಇನ್ನೊಬ್ಬರ ಕೈಲಿ ಕೆಲಸ ಮಾಡಿಸುವ ತನಕ ಅಲ್ಲೇ ನಿಂತಿರುವರು.

ಅದೇ ಅಧಿಕಾರ ಚಲಾಯಿಸುವವರು ಅದು ಮಾಡು
ಇದು ಮಾಡು ಎಂದು ಹೇಳುತ್ತಲೇ ಬೇರೆಯವರ ಕೈಲಿ ಕೆಲಸ ಮಾಡಿಸಲು ಹೊರಡುವರು. ಆಳು ಮಾಡಿದ್ದು ಹಾಳು ಎಂಬಂತೆ ಆತ ಕೆಲಸ ಮಾಡದೇ ಹೋದರೆ ಅಲ್ಲೇ ನಿಂತುಬಿಡಬೇಕಾಗುತ್ತದೆ.

-


13 HOURS AGO

Be cautious while bursting firecrackers.
Keep water and sand nearby at all times.
Remember, bursting crackers is like
Burning money in just a moment.
The smoke can worsen asthma and
breathing problems. When there are
elderly people and children at home, we
Must be extra careful. Light a lamp
Instead, its glow removes darkness and s
Spreads brightness.

Wishing you a very happy and safe Festival of Lights!

-


13 HOURS AGO

ಪಟಾಕಿ ಸುಡುವಾಗ ಜಾಗೃತಿ ಮಾಡಿರಿ.
ನೀರು ಮರಳು ಹತ್ತಿರವೆ ಇರಲಿ..
ಪಟಾಕಿ ಸುಡುವುದು ಎಂದರೆ ಹಣವನ್ನು
ಕ್ಷಣಮಾತ್ರದಲ್ಲಿ ಸುಟ್ಟ ಹಾಗೆ..
ಹೊಗೆಯಿಂದ ಅಸ್ತಮಾ ಹೆಚ್ಚಾಗುತ್ತದೆ.
ಮನೆಯಲ್ಲಿ ಹಿರಿಯರು ಮಕ್ಕಳು ಇದ್ದಾಗ
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು
ಪಟಾಕಿ ಸುಡಬೇಕು. ಹಣತೆ ಬೆಳಗಿಸಿ.
ಕತ್ತಲನ್ನು ಕಳೆದು ಬೆಳಕು ನೀಡುತ್ತದೆ.
--ಬೆಳಕಿನ ಹಬ್ಬದ ಶುಭಾಶಯಗಳು--

-


19 OCT AT 12:43

ಬೆಳಕಿನ ಹಬ್ಬ ದೀಪಾವಳಿ,
ಮನೆಮನೆಗೂ ಸಂತಸ ತರಲಿ.
ಸಿಹಿಯ ಹಂಚಿ, ಸಂಪ್ರದಾಯ ಪಾಲಿಸಿ,
ಸಿರಿವಂತಿಕೆ ಸದಾ ಬೆಳಗಲಿ. - ಸಿಂಧು🍁

-


19 OCT AT 10:58

ಸಮರ್ಪಣೆ ಯಾವಾಗಲೂ ಮೌಲ್ಯಬದ್ಧ ಫಲ ನೀಡುತ್ತದೆ. ಮಾಡಿದ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಎಲ್ಲರೂ ಹೊಗಳಬೇಕು ಎಂದು ಬಯಸಬಾರದು. ಪ್ರತಿಫಲದ ಆಸೆ ಇಲ್ಲದೇ ಮಾಡುವ ಕೆಲಸಗಳು ನಿಜವಾದ ತೃಪ್ತಿಯನ್ನು ನೀಡುತ್ತವೆ. ಹಾಗೆಯೇ, ಅವು ಭವಿಷ್ಯದಲ್ಲಿ ನಮ್ಮನ್ನು ಕಾಪಾಡಿ, ಮತ್ತಷ್ಟು ಶ್ರೇಷ್ಠ. - ನುಡಿಸಿಂಧು🍁

-


19 OCT AT 10:37

Dedication always brings meaningful results. One should not expect praise from others for every good deed. The work done without seeking rewards gives true satisfaction and, in time, protects and uplifts our future.

-


15 OCT AT 20:13

You showed how dedication, hard work, and humility can turn an ordinary life into an extraordinary example. Your journey from Rameswaram to Rashtrapati Bhavan proves that no dream is too big when we believe in ourselves.

-


2 OCT AT 11:05

ಮಹಾತ್ಮ ಗಾಂಧೀಜಿ

"ಸತ್ಯಮೇವ ಜಯತೆ" ಎಂದು ಹೇಳಿ,
ಭಯವಿಲ್ಲದೆ ಹೋರಾಟ ಮಾಡಿದರು
ಸ್ವಾತಂತ್ರ್ಯದ ದಾರಿಯಲಿ,
ಮಕ್ಕಳಿಗೆ ದಾರಿ ತೋರಿದರು//

ಚಕ್ರ ತಿರುಗಿಸಿದ ಕೈಯಲಿ,
ಸ್ವಾವಲಂಬನೆ ಕಲಿಸಿದರು
"ಸ್ವದೇಶಿ" ಎಂಬ ಮಂತ್ರದಿಂದ,
ಪ್ರತಿಯೊಬ್ಬರ ಮನ ಬೆಳಗಿದರು//

ಸರಳತೆ ಅವರಿಗೆ ಶರಣ,
ದೇಶಭಕ್ತಿ ಅವರ ಆಭರಣ..
ಗಾಂಧೀಜಿ ಪಾಠವನು ನೆನೆದು,
ಒಳ್ಳೆಯ ದಾರಿಯನು ಹಿಡಿದು
ನಾವು ನಡೆಯೋಣ //

-


2 OCT AT 10:52

ಮಧ್ವಾಚಾರ್ಯ ಜಯಂತಿ

ಉಡುಪಿಯ ನೆಲೆಯಲಿ ಜನಿಸಿದ ಜ್ಞಾನಿ,
ಭಕ್ತಿ–ಭಾವದ ದೀಪ ಬೆಳಗಿದ ಧ್ಯಾನಿ..
ದ್ವೈತ ತತ್ವದ ಸಾರ ಬೋಧಿಸಿದವರು,
ಮಧ್ವಗುರು ನಮ್ಮ ಹೃದಯದವರು//

ಹರಿಭಕ್ತಿಯ ಮಾರ್ಗ ತೋರಿದವರು,
ವಿಷ್ಣುವಿನ ಕೀರ್ತನೆ ಹರಡಿದವರು.
ಸರಳ ಭಾಷೆಯ ಪಾಠ ಬೋಧಿಸುತ
ಜನಮನದಲ್ಲಿ ಜ್ಯೋತಿ ಬೆಳಗಿಸಿದವರು//

ಅವರ ಜಯಂತಿ ಹಬ್ಬವು ನಮಗೆ
ಭಕ್ತಿಗಾನದಿಂದ ತುಂಬುವುದು ಮನವು
ಮಧ್ವಗುರು ಹೆಸರು ಶಾಶ್ವತ ಹೊಳಪು,
ಭವಿಷ್ಯದಲ್ಲಿನ ಅಮೂಲ್ಯ ಕಿರಣವು//

-


2 OCT AT 9:50

ಲಾಲ್ ಬಹಾದ್ದೂರ್ ಶಾಸ್ತ್ರಿ

ದೇಶವನು ಮುನ್ನಡೆಸಿದ ಪ್ರಭಾವಿ ನಾಯಕರು
ಸತ್ಯ–ಧೈರ್ಯ ಅವರ ದಾರಿಗೆ ಬೆಳಕು...

"ಜೈ ಜವಾನ್ – ಜೈ ಕಿಸಾನ್" ಎಂದು ಘೋಷಿಸುತ
ಸೈನಿಕರ -ರೈತರ ಬೆನ್ನು ತಟ್ಟಿದರು..

ಉನ್ನತ ಚಿಂತನೆ ಪ್ರಾಮಾಣಿಕತೆಯ ಮೂರ್ತಿ
ದೇಶವನು ಗರ್ವದಿಂದ ಬೆಳಗಿಸಿದ ಕೀರ್ತಿ..

ಭರತ ಭೂಮಿಯ ಮಿನುಗು ನಕ್ಷತ್ರ,
ಶಾಸ್ತ್ರಿಜಿ ಹೆಸರು ಎಂದಿಗೂ ಶಾಶ್ವತ..

-


Fetching TULASI NAVEEN 🌦 Quotes