ಖಾಲಿಯಾಗದ ಅಂದದ ಅಕ್ಷಯ ಪಾತ್ರೆ ನೀನು,
ಬಡಿಸಿ ಉಣಬೇಕಿದೆ ಬೆಳದಿಂಗಳ ಪುಟ್ಟ ಕಣ್ ಬಟ್ಟಿಲಲ್ಲಿ..
ಕಳೆದು ಹೋದ ಕವಿತೆಯ ಪದಪುಂಜ ಸಾಲ ನೀನು
ಸ್ತಬ್ಧ ನಾ ತೀರದ ಮುಗುಳುನಗೆಯ ನೋಡುತ್ತಿರಲು..
ಶಾಶ್ವತ-
ಮತ್ತೆ ಒಲವಾಗಿದೆ ಚೂರು ನಿನ್ನ ಕಾಡಿಗೆಯು ಕಾಡಿದಾಗ,
ನನ್ನನ್ನೇ ನೋಡುತ ನಿನ್ನ ಜುಮುಕಿಯು ಕೂಗಿಲಿ ಈಗ,
ಗರಿಬಿಚ್ಚಿ ನವಿಲಾಗುವೆ ನೀ ನಲಿಯುವಾಗ,
ಮುಂಗುರಳು ಮುಂದಾಗಿವೆ ಮಂದವೇಗದಿ ನಿನ್ನ ನೋಡಲು ಬೇಗ..
ಶಾಶ್ವತ-
ಸುಪ್ತ ಮನಸಿನ ಸಪ್ತ ಸ್ವರ ನೀನು,
ಆರೋಹಣ ಅವರೋಹಣದಿ ಆಮಂತ್ರಣ ನೀಡಿದ ನೀ ಗುಪ್ತಗಾಮಿನಿಯು..
ಶಾಶ್ವತ-
ಎಲ್ಲವ ತೊರೆದು ಹುಡುಕುತ ಹೊರಟೆ ತಂಗುದಾಣದ ನೆಲೆ,
ಅಲ್ಲಿಯೂ ನನ್ನ ಬಿಡದ ನೀ ಮಲೆನಾಡ ಕುಂಭದ್ರೋಣ ಮಳೆ..
ಶಾಶ್ವತ-
ಮನದ ನೀರವತೆಗೆ ಭಾವನೀಯ ಭಂಗ ನೀನು ..
ಸಾರಂಗದ ಮನವು ಓಡದೆ ನಿಂತಿದೆ ಸಾಕಷ್ಟು ರಾಗಕೆ ಶ್ರುತಿ ನೀಡಲು ...
ಶಾಶ್ವತ-
ಕ್ಷಣ ಚಿತ್ತ ನಾನು, ಕ್ಷಣ ಪಿತ್ತ ನೀನು,
ಅನಿರೀಕ್ಷಿತ ಭಾವನೆಗೆ ಪರಿಚಿತಳು ನಾನಿನ್ನು..
ಬುದ್ಧ ಈ ಮನಸಿಗೆ ಭಯೋತ್ಪಾದನೆ ನೀನು,
ಕಂಗಾಲಾಗುವ ನಿನ್ನ ಪರಿಗೆ ಕನವರಿಸುತ ಕಾಯುವೆನು..
ಶಾಶ್ವತ-
ಸಾವಿರ ಸದ್ದಿನ ಗದ್ದಲದ ನಡುವೆ,
ನಿನ್ನ ಮೌನದ ಗೊಂದಲವು ಸೆಳೆಯಿತು ಕೊನೆಗೆ..
ಶಾಶ್ವತ-
ದೂರದಿ ಮನವು ನಿರ್ಲಿಪ್ತತೆಯ ಬಯಸಿದಾಗ..
ಶೂನ್ಯ ಚಿತ್ತದ ಕಥನವು ಗಸ್ತು ಮಾಡಿತು ಈಗ.....
ಶಾಶ್ವತ
-
Khwahish thi ki tere khayaal ki mehmaan ban jao..
Socha nahi tha ki tumne to mujhe apne jazbaat ki mehfill bana liya...-