ನಿನ್ನ ಪ್ರೀತಿಯ ಬಣ್ಣವೇ ಅಂತಹದ್ದು…
ಅದರ ಮುಂದೀಗ ಯಾವ ಬಣ್ಣವು ಏರುತ್ತಿಲ್ಲ.-
मासूम मन का एक छोटा लेखक.
A small writer of the innocent mind.
.
... read more
ಯಾವುದೇ ವಿಷಯವಾಗಲಿ ಒಮ್ಮೊಮ್ಮೆ ನೆನಪಿನಲ್ಲಿಡುವುದಕ್ಕಿಂತ, ಮರೆತುಬಿಡುವುದೇ ಬಹಳ ಕಷ್ಟ ಅಂತ ಅನಿಸತೊಡಗುತ್ತದೆ.
-
ಶಶಿಗೂ ಸಂತಸವಾಗಿರಬಹುದು, ಅವರ ಹೆಸರೂ ಬಹುದೊಡ್ಡ ಹೆಸರು ಮಾಡಿತೆಂದು,
ಸೂರ್ಯನಗರಿಯ ಪುತ್ರ
ಬರಹಗಳಿಗೆ ಸೂತ್ರ
ಅವರೇ ನಮ್ಮ ಮಿತ್ರ
ಸಹೃದಯಿ ಹಾಗು ಕರುಣಾಮಯಿ
ನಮ್ಮೇಲ್ಲರ ನೆಚ್ಚಿನ ಬರಹಗಾರರು
ಶ್ರೀಯುತ ಪ್ರಹ್ಲಾದ ಶಾಂತ ಕಾಂತ (ಶಶಿಕಾಂತ ದೇಸಾಯಿ) ಸರ್
ಅವರು YourQuote ನಲ್ಲಿ ೨೦೦೦ ಕೋಟ್ ಗಳ ಸೂತ್ರಧಾರಿ, ಹೀಗೆ ಅವರ ಕನ್ನಡ ಸೇವೆ ನಿರಂತರವಾಗಿರಲಿ ಅಂತ ಅವರಲ್ಲಿ ಕೇಳಿಕೊಳ್ಳುತ್ತಾ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
💐💐🥳🥳🤝🤝❤️-
ಒಂದೊಮ್ಮೆ ಬಂದು ಅಪ್ಪಿಕೋ
ರಾತ್ರಿ ಚಂದಿರನನ್ನು ಅಪ್ಪಿಕೊಂಡ ಹಾಗೆ
ಹಗಲು ಸೂರ್ಯನನ್ನು.
ಆದರೆ ಸುಡುವ ಬಯಕೆ ಬೇಡ,
ಈ ಬೇಸಿಗೆ ಹೋಗಲಿ ಮತ್ತೆ ಸಿಗುವ ಶ್ರಾವಣದಲ್ಲಿ,
ಚಿಗುರೊಡೆದು ಹೂವಾಗುವ ಹೊತ್ತಲಿ ಎಲ್ಲರೂ ನಮ್ಮನ್ನೇ ನೋಡಲಿ.-
ಈ ಬದುಕಿನ ಹೋರಾಟದಲ್ಲಿ ಕಹಿ ಘಟನೆಗಳನ್ನು ನುಂಗಿಯಾದರೂ ಮುಖದಲ್ಲೊಮ್ಮೆ ಮಂದಹಾಸವನ್ನು ತರಬಹುದು; ಆದರೆ ಈ ಕಹಿ ಮಾತ್ರೆಗಳನ್ನು ನುಂಗಿದಾಗಂತೂ ಮುಖವಷ್ಟೇ ಅಲ್ಲ ಅಂದಿನ ಜೀವನದ ಮಂದಹಾಸವೇ ಕಳಚಿಬಿದ್ದಿರುತ್ತದೆ.
-
ನೀನಿರಲು ಉಯ್ಯಾಲೆ ತೂಗುತಿರೆ
ನಾನಿರಲು ಉದ್ಯಾನ ತೋರುತಿರೆ
ನಿನ್ನಿರುವು ದುಖದಲಿ ಬರುತಿರೆ
ನನ್ನಿರುವು ಸುಖದಲಿ ಕೇಳುತಿರೆ
ನಿನ್ನೊಲವು ಮಳೆಗಾಲ ತರುತಿರೆ
ನನ್ನೊಲವು ಚಳಿಗಾಲ ಬಯಸಿದೆ
ವಿರಹ ಹರಣ ಬಳಿಯಿರೆ
ಪ್ರೇಮ ನಗ್ನ ಬಡಿದಿರೇ.-
ಮಳೆ ನಿಂತ ಮುಂಜಾವಿಗೆ
ಸೂರ್ಯನ ಕಿರಣದ ಬಿಸಿ ಚುಂಬನ
ವಿರಹ ನಿಂತ ಮುಂಜಾವಿಗೆ
ಒಲವಿನ ವಿರಳದ ಬಿಸಿ ಚುಂಬನ
ಬಾಂಧವ್ಯ ನಿಂತ ಮುಂಜಾವಿಗೆ
ಬಂಧದ ಬಿಸಿ ಚುಂಬನ.
-
ಪ್ರತಿರಾತ್ರಿಯ ನಿದ್ದೆ ಗುಂಗಿನಲ್ಲಿದ್ದಾಗ
ಬಂದು ಕಾಡುವ ಗುಂಗಿಹುಳುವೂ
ತಡರಾತ್ರಿ ನಿದ್ದೆ ತಡವರಿಕೆಯಲ್ಲಿದ್ದಾಗ
ರಕ್ತ ಹೀರುವ ತಿಗಣಿಹುಳುವೂ
ನಡುರಾತ್ರಿ ನಿದ್ದೆ ನೋಟದಲ್ಲಿದ್ದಾಗ
ಕಚ್ಚಿ ನಿದ್ದೆಗೆಡಿಸುವ ಸೊಳ್ಳೆಯೂ
ಒಲವ ನಿದ್ದೆ ಸವಿಯುತ್ತಿರುವಾಗ
ವಿರಹದ ರೋದನೆ ನೆನೆಯುತ್ತಿರುವಾಗ
ಭವದ ಬಂಧನದ ಬಾಂಧವ್ಯವನ್ನು
ನೀನೇ ಬಂದರೂ ಕೆಡಿಸಲಾಗದು.-