ನಡೆಯುವವರು ನುಡಿಯುವುದಿಲ್ಲ
ನುಡಿಯುವವರು ನಡೆಯುವುದಿಲ್ಲ
ನಡೆನುಡಿಯಲಿ ಬೇಧ ಇರುವುದಿಲ್ಲ
-
ಪ್ರಯತ್ನವಿಲ್ಲದೆ ಹುಲ್ಲುಕಡ್ಡಿ ಸರಿದಾಡದು
ಹಣೆಬರಹ ನೆಚ್ಚಿದವರ ಬಾಳು ಗೋಳು-
ಗಜಲ್
ಅವರವರ ದಾರಿಯಲ್ಲಿ ಶುದ್ಧರೆ ನಾವೆಲ್ಲರು ಒಳ್ಳೆಯದು ಕೆಟ್ಟದ್ದು ಅರಿತವರು ನಾವೆಲ್ಲರು
ಉಳ್ಳವರು ಅದರ ರಕ್ಷಣೆಯಲಿ ಕಾಲ ಕಳೆವರು
ಸ್ವಾರ್ಥ ಸುಖಕ್ಕಾಗಿ ಕದಿಯುವೇವು ನಾವೆಲ್ಲರು
ಮಕ್ಕಳು,ಮೊಮ್ಮಕ್ಕಳಿಗಾಗಿ ಕೂಡಿಡುವವರು
ಅನ್ನ,ಅರಿವು,ಅಕ್ಷರ ಇಲ್ಲದೆ ಸತ್ತರು ನಮ್ಮವರು
ಕರುಣೆ ಇಲ್ಲದೆ ಹಗಲು ದರೋಡಿ ಮಾಡುವವರು
ಕೊನೆಗೆ ಬರಿಗೈಯಲ್ಲಿ ಹೋಗುವೇವು ನಾವೆಲ್ಲರು
ದುಡ್ಡಿಗಾಗಿ ಆಹಾರದಲಿ ವಿಷ ಭರಿಸುತಿರುವರು
ವಿಷ ತಿಂದು ರೋಗದಲ್ಲಿ ಬಳಲುತಿದ್ದೆವೆ ನಾವೆಲ್ಲರು
ಡಾ.ವಿಜಯಕುಮಾರ ಪರುತೆ
-
ಯಾರೋ ಆಗಂತುಕ ವ್ಯಕ್ತಿಗಳು
ನನ್ನ ಫೇಸ್ಬುಕ ಹ್ಯಾಕ
ಮಾಡಿ,ಜನರನ್ನು ವಂಚಿಸುತಿದ್ದಾರೆ
ಅದರಿಂದ ಜಾಗೃತರಾಗಿರಿ
ಡಾ.ವಿಜಯಕುಮಾರ ಪರುತೆ-
ಕೊರೆವ ಚಳಿ
ಖಾಲಿ ಹೊಟ್ಟೆ ಭಿಕ್ಷುಕ
ಜೀವಂತ ಶವ
ಹಕ್ಕಿ ಸಲ್ಲಾಪ
ಎಲೆ,ಹೂ,ಹಣ್ಣು ಸಾಕ್ಷಿ
ಮೂಕವಿಸ್ಮಿತ
ಅಜ್ಜಿ ತೊಟ್ಟಿದ
ಶ್ವೇತ ವಸ್ತ್ರ,ಅಜ್ಜನ
ಅಗಲುವಿಕೆ
*ಡಾ.ವಿಜಯಕುಮಾರ ಪರುತೆ
-
ಹೈಕುಗಳಲಿ
ಜುಗಲಬಂದಿ,ಶಬ್ದ
ಭಾವ ಮಿಲನ
ಹೈಕು ವಿಚಿತ್ರ
ನುಡಿಗಟ್ಟು,ತಲೆಯು
ಕೊರೆವ ಕಾವ್ಯ
೧೭ವರ್ಣಮಾಲೆ
ಹೈಕು ಕಾವ್ಯ ಪ್ರಕಾರ
ಭಾವ ಕಣಜ
*ಡಾ.ವಿಜಯಕುಮಾರ ಪರುತೆ-
ಕಾಗೆ ಗೂಬೆಯು
ಅನಿಷ್ಟವಲ್ಲ,ಸೃಷ್ಟಿ
ಸಮತೋಲನ
ಕಾಡಂಚಿನಲ್ಲಿ
ಬುಡಕಟ್ಟು ಜನಾಂಗ
ಮುಖ್ಯವಾಹಿನಿ
ಹೋಟಲ್ ಊಟ
ರುಚಿ,ಮಾಣಿ ಬೆವರು
ಕಲಬೆರಕೆ
*ಡಾ.ವಿಜಯಕುಮಾರ ಪರುತೆ
-