ಕುಣಿಗಲ್ ದಿನೇಶ್ ಕುಮಾರ್   (ಕುಣಿಗಲ್ ದಿನೇಶ್ ಕುಮಾರ್)
114 Followers · 81 Following

Joined 26 July 2018


Joined 26 July 2018

ತಪ್ಪದೇ ಮತ ಚಲಾಯಿಸಿ
ಜಾತಿ ಧರ್ಮ ಪಕ್ಷಗಳ ಹೊರತುಪಡಿಸಿ
ವೈಚಾರಿಕ ವಿಚಾರಗಳ
ಯೋಚಿಸಿ ಮತ ಚಲಾಯಿಸಿ
ಸಮಸ್ಯೆಗಳ ಚಿಂತಿಸಿ
ಪರಿಹಾರಕ್ಕಾಗಿ ಮತ ಚಲಾಯಿಸಿ
ಪ್ರಾಮಾಣಿಕವಾಗಿ ಮತ ಚಲಾಯಿಸಿ
ಪಾರದರ್ಶಕ ವಾಗಿ ಮತ ಚಲಾಯಿಸಿ
ಆಸೆ ಆಮಿಷಗಳನ್ನು ತ್ಯಜಿಸಿ
ಮತ ಚಲಾಯಿಸಿ
ಯಾರಿಗಾದರೂ ಸರಿ ಬಹುಮತ
ಬರುವಂತೆ ಮತ ಚಲಾಯಿಸಿ
ಯೋಗ್ಯರಿಗೆ ಮತ ಚಲಾಯಿಸಿ
ಎಲ್ಲಿದ್ದರೂ ಬಂದು ಮತ ಚಲಾಯಿಸಿ
ಸ್ವಾರ್ಥವನ್ನು ತ್ಯಜಿಸಿ ಮಚ ಚಲಾಯಿಸಿ
ಶಾಂತಿ ಸೌಹಾರ್ದತೆ ಯಿಂದ
ಶಾಂತಿ ಸೌಹಾರ್ದತೆ ಗಾಗಿ
ಶಾಂತಿ ಸೌಹಾರ್ದತೆಗೋಸ್ಕರ
ಪ್ರಜಾಪ್ರಭುತ್ವದ ಉಳಿವಿಗಾಗಿ
ನವ ಕರ್ನಾಟಕ ನಿರ್ಮಾಣಕ್ಕಾಗಿ
ಮತ ಚಲಾಯಿಸಿ....

-



ಸ್ವಾರ್ಥವಾಗಿ ಸುಖದಿಂದ
ಬದುಕೋದು ಬದುಕಲ್ಲ.‌‌..
ಹಲವರನ್ನು ಸುಖವಾಗಿ
ಬದುಕಿಸುವುದು
ನಿಜವಾದ ಬದುಕು

-



ದೇಹ ಮಣ್ಣಾಗುವ ಮುನ್ನ
ನೆನಪುಗಳು ಮಾಸಿ ಹೋಗುವ ಮುನ್ನ
ಪ್ರೇಮಿಸಿದ ಜೀವ
ಪ್ರೀತಿಸಿದ ಜೀವ
ಗಾಢ ಸ್ನೇಹದ ಜೀವ
ಗತಿಸಿದ ಜೀವ
ಜೀವಂತವಿರದ ಜೀವ
ಎಂದೆಂದಿಗೂ ಜೀವಂತ

-



ಅಪ್ಪುವಿಗೆ
ಪೂಜೆ ಸಲ್ಲಿಸಲಾರೆ
ಅಪ್ಪು ನಿಂಗೆ
ಪುಷ್ಪಾಂಜಲಿ ಸಲ್ಲಿಸಲಾರೆ
ಅಪ್ಪುವಿನ
ಪುಣ್ಯ ಸ್ಮರಣೆ ಮಾಡಲಾರೆ...
ಸಾಧ್ಯವಾದರೆ
ಅಪ್ಪುವನ್ನು ಆರಾಧಿಸುವೆ
ಸಾಧ್ಯವಾದರೆ
ಅಪ್ಪುವನ್ನು ಅನುಕರಿಸುವೆ
ಸಾಧ್ಯವಾದರೆ
ಅಪ್ಪುವನ್ನು ಅನುಸರಿಸುವೆ
ಪುಣ್ಯ ಸ್ಮರಣೆಯ ಬದಲು
ಸದಾ ಸ್ಮರಿಸುವೆ
ಅಪ್ಪು ನಿನ್ನ ತತ್ವ ಆದರ್ಶ
ಸಿದ್ಧಾಂತಗಳನ್ನು
ಪಾಲಿಸಲು ಪ್ರಯತ್ನಿಸುವೆ.

-



ಎಲ್ಲ ಎಲ್ಲೆಗಳ ಮೀರಿ
ಕಗ್ಗೊಲೆಯಾಗುತಿದೆ
ಪ್ರಜಾಪ್ರಭುತ್ವ

ಹೇಗಾದರಿ ಸರಿ
ಪ್ರಭಾವಗಳ ಭೀರಿ
ಅಧಿಕಾರಕ್ಕೇರಿದವನದೆ
ಮದದ ಪ್ರಭುತ್ವ...

ಯಾರಿಗೆ ಬೇಕಿತದೆ
ರೀತಿ ನೀತಿ ನಿಯತ್ತು
ದುಡ್ಡಿದ್ದವನದೇ
ದೊಡ್ಡ ಗಮ್ಮತ್ತು....ಥೂ


-



ಸಾಧನೆಯ ಮೂಲಕವೇ ಉತ್ತರ ನೀಡಿ

-



ಎಲ್ಲವೂ ಖಾಲಿ ಖಾಲಿ ಕತ್ತಲು
ಭಯವೇ ತುಂಬಿರುತ್ತೆ ಸುತ್ತಲು
ಬೆಳಕಿನ ಕಿಂಡಿಯ ಸುಳಿವಿಲ್ಲ
ಭರವಸೆಯ ಬೆಳಕಿಲ್ಲ
ನಕ್ಷತ್ರ ವೆಂಬುದು ಬೆಳಕಲ್ಲ
ಮನದ ಖುಷಿಯ ಹೂಳಹು

-



ಕೊರೋನದಿಂದಾಗಿ ಎಷ್ಟು ಜನರನ್ನು ಕಳೆದುಕೊಂಡೆವು ಎಂಬುದಲ್ಲ ಮುಖ್ಯ
ಎಂತೆಂಥವರನ್ನು ಕಳೆದುಕೊಂಡೆವು
ಎಂಬುದಷ್ಟೇ ಮುಖ್ಯ...
ಆದರೆ ಈ ಕೊರೋನ ಕಾರಣದಿಂದಾಗಿ
ನೀವುಗಳು ಹೋಗಬಾರದಿತ್ತು.
ನೀವು ಸಾಯಲು ಇಂದೊಂದು ಕಾರಣವಾಗಿತ್ತು
ಇಲ್ಲ....ನೀವಿನ್ನೂ ಬಾಳಿ ಬದುಕಬಹುದಿತ್ತು.
ವ್ಯವಸ್ಥೆಯೇ ಬಯಸಿಯಾಗಿತ್ತು ಕೊರೋನಾದ ಸಖ್ಯ.

-



ಪ್ರತಿನಿತ್ಯವೂ ರೈತನಾಚರಣೆ
ಈ ಪರಿಸರ ದಿನಾಚರಣೆ
ಆದರೇನು ಫಲ
ಅತನೊಂದಿಗೆ ಬೆಳೆಗಿಲ್ಲ ಬೆಲೆ
ಬೆಳಗಲಿಲ್ಲ ಬಾಳು.
ಇಂದಿನ ಪರಿಸರ
ದಿನಾಚರಣೆಯಂದು
ಅಬ್ಬರ ನಮ್ಮದೇ
ಆರ್ಭಟ ನಮ್ಮದೇ
ಬೆಳಿಗ್ಗೆಯಿಂದೊಂದು
ಸಣ್ಣ ಸಸಿಗಿಡ ನೆಟ್ಟು
ನೆಟ್ಟಿಗಾಕಲು ನೆಟ್ಗಿಲ್ಲ ನೆಟ್ಟು
ಪರಿತಪಿಸಿದ ಪರಿಸರ ಪ್ರೇಮಿ
ವರ್ಷ ಪೂರ್ತಿ ರೈತನದಾದರೆ
ಇಂದು ಪೂರ್ತಿ ನಿನ್ನದೇ ನಿಸರ್ಗಾಮಿ
ನಾಳೆಯಿಂದ ಹಾಳಾಗೋದರೂ
ನೀನೆಟ್ಟ ಗಿಡ ಕಾಳಜಿಬೇಡ
ಇದ್ದೇ ಇದೆಯಲ್ಲ ನೆಟ್ಟ
ಮೊಬೈಲ್ ಫೋಟೋ.
ವರ್ಷದವರೆಗೆ ಬೆಳೆಸೋಣ
ಅಲ್ಲೇ ಆನ್ ಲೈನ್ ನಲ್ಲೇ....

-



ಮುಖವೇ ಇಲ್ಲದವರು
•~•~•~•~•~•~•~•~•~•
ಹೀರೋ ಆದರೇನು
ಬಿಕ್ಷುಕನಾದರೇನು...
ಸುಂದರ ಪುರುಷನಾದರೇನು
ಸುಂದರಿಯೆಂಬ ಸ್ತ್ರೀಯಾದರೇನು
ಬಡವನಾದರೇನು
ಬಲ್ಲಿದನಾದರೇನು
ಬಣ್ಣ ಕಪ್ಪಾದರೇನು
ಕೆಂಪಾದರೇನು
ಬಿಳುಪಾದರೇನು
ಅಧಿಕಾರಿಯಾದರೇನು
ಅಲೆಮಾರಿಯಾದರೇನು
ಮುಖಮುಸುಕು
ಸಾವಿರದಾದರೇನು
ನೊರರಾದರೇನು
ಹತ್ತರದಾದರೇನು
ಕರ್ಚೀಫಾದರೇನು
ಸೀರೇಯ ಸೆರಗಾದರೇನು
ಹೆಗಲಮೇಲಿನ ಒಲ್ಲಿ
ಬಟ್ಟೆಯದಾದರೇನು
ಮಾಸ್ಕಿನ ಮರೆಯಲ್ಲಿ
ಮುಖವೇ ಇಲ್ಲದವರು
ನಾವೆಲ್ಲರೂ ಸಮಾನರು
ಕುಣಿಗಲ್ ದಿನೇಶ್

-


Fetching ಕುಣಿಗಲ್ ದಿನೇಶ್ ಕುಮಾರ್ Quotes