💐ಯುವರತ್ನನಿಗೆ ನುಡಿ ನಮನ💐
ರಾಜಕುಮಾರ್ ನ ಪ್ರೇಮದ ಕಾಣಿಕೆಯಾಗಿ ಪೃಥ್ವಿಗೆ ಕಾಲಿಟ್ಟ ತಾಯಿಗೆ ತಕ್ಕ ಮಗನಿವನು ...ನೋವುಂಡವರ ಬದುಕಿಗೆ ಹೊಸಬೆಳಕು ಮೂಡಿಸಿ ವಸಂತ ಗೀತೆ ಮೊಳಗಿಸಿದ ಪರಶುರಾಮನು...ಯಾರಿವನು ಎನ್ನದೇ ಪ್ರತಿಯೊಬ್ಬರಿಗೂ ನಿನ್ನಿಂದಲೇ ಎಂದು ಅಭಿಮಾನಿಗಳ ಹೃದಯ ಗೆದ್ದ ರಾಜಕುಮಾರನು... ಮುದ್ದಾದ ಎರಡು ನಕ್ಷತ್ರಗಳಿಗೆ ಜನ್ಮ ನೀಡಿ ಅಪ್ಪಾ ಎಂದರೆ ಆಕಾಶದಷ್ಟು ವಿಶಾಲ ಎಂದು ತೋರಿಸಿಕೊಟ್ಟ ರಾಜ್ ಇವರು..ಭಾಗ್ಯವಂತರು ನಾವು ಅನಾಥರ ರಕ್ಷಣೆಗೆಂದೇ ಭೂಮಿಗೆ ಬಂದ ಭಗವಂತರಿವರು...ಜೀವನದ ಕಷ್ಟಸುಖದ ಚಕ್ರವ್ಯೂಹದಲ್ಲಿ ರಣವಿಕ್ರಮನಂತೆ ಶಕ್ತರಾಗಿ ಹುಡುಗರ ಮನದಲ್ಲಿ ದೇವರೇ ಆದ ದೊಡ್ಮನೆ ಹುಡುಗನಿವನು ...ಯಾರೇ ಕೂಗಾಡಲಿ ನಮ್ಮ ಕೆಲಸವೇ ನಮಗೆ ಪರಮಾತ್ಮ ಎಂದು ತೋರಿಸಿಕೊಟ್ಟ ರಾಮ್ ಇವರು...ಮೇಲು ಕೀಳು ಎನ್ನದೇ ಎಲ್ಲರೊಂದಿಗೆ ಮಿಲನವಾಗಿ ಬಾಂಧವ್ಯದ ಮೈತ್ರಿ ಬೆಸೆದ ಅರಸನಿವರು...ಕಾಣದಂತೆ ಸಮಾಜ ಸೇವೆಯಲ್ಲಿ ತೋಡಗಿ ಆದಶ೯ದ ಬದುಕು ಬದುಕಿದ ಯುವರತ್ನನಿವನು...ಅಭಿ ಇಲ್ಲದೇ ಅಭಿಮಾನಗಳ ಮನಸು ಒಡೆದುಹೋಗಿದೇ...ಮನೆ ಮನಗಳಲ್ಲಿ ಮನೆ ಮಾಡಿದ ವೀರ ಕನ್ನಡಿಗ ಇಂದು ಕಣ್ಮುಂಚಿ ಚಲಿಸುವ ಮೋಡಗಳುಗಳು ನಿಂತಿದೆ ...ಅರಳಿ ಬಾಳಬೇಕಿದ್ದ ಬೆಟ್ಟದ ಹೂವು ಮುಡಿದು ಮರೆಯಾಗುತ್ತಿದೆ ....ಹೇ ಅಪ್ಪು ನೀವು ಕಣ್ಣೆದುರಿಗೇ ಇರಲಾರಿರಿ ಎಂದು ತಿಳಿದು ಅಭಿಮಾನಿಗಳ ಗೋಳಾಟಕ್ಕೆ ಪೃಥ್ವಿಯೇ ನಡುತಿದೆ....ಕ್ಷಮಿಸಿ ಬಿಡಿ ಸರ್ ವಿಧಿಯಾಟದ ಮುಂದೆ ನಾವು ಮೂಖರಾದರೂ ಆ ದೇವರನ್ನು ಮನದಲ್ಲಿ ಶಪಿಸದೇ ಇರಲಾರೆವೂ... ಎಂದು ಮರೆಯಾಗದ ಮುಗ್ಧ ನಗು ನಗುವಿನ ರಾಜ ಮನದಲ್ಲಿ ನಿವೇಂದಿಗೂ ಅಜರಾಮರ...ಕಳಕಳಿಯ ವಿನಂತಿ ಮರಳಿ ಬಂದು ಬಿಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸರ್ ...ಲವ್ ಯೂ ಸರ್ ... ಮಿಸ್ ಯೂ 💟💟🙏🙏💐💐😔😔
-