ಗೀತಾ ಜಿ ಹೆಗಡೆ   (🌸ಸಂಗೀತಾ ಕಲ್ಮನೆ🌸)
600 Followers · 112 Following

read more
Joined 14 August 2018


read more
Joined 14 August 2018


ದೇವರು ಅಂದರೆ ನಿರಾಕಾರ, ಅದ್ಭುತ ಶಕ್ತಿ. ಯಾವ ಆಸೆ ಆಕಾಂಕ್ಷೆಗಳೂ ಇಲ್ಲದ ಅಗೋಚರ ದಿವ್ಯ ಮೂರ್ತಿ. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಾಕು. ಸದಾ ನಮ್ಮನ್ನು ಕಾಪಾಡುತ್ತಾನೆ.

ಆಸೆ ಇರುವುದೆಲ್ಲ ಮನುಷ್ಯನಿಗೆ. ಮನುಷ್ಯ ತನ್ನನ್ನು ತಾನು ಶೃಕಗರಿಸಿಕೊಂಡಂತೆ ದೇವರನ್ನೂ ವೈಭವೀಕರಿಸಿ ಭಕ್ತರಲ್ಲಿ ಮೌಢ್ಯ ಹೆಚ್ಚಾಗುವಂತೆ ಮಾಡಿದ್ದಾನೆ. 

-



ಬಿಸಿಲಿಗೆ ಬಾಡಿ 
ಬೆಂಡಾದ ಇಳೆ ಹೇಳಿತು 
ಮಳೆರಾಯ ನೀನೆಂದು ಬರುವೆ
ತಾಪ ತಡೆಯಲಾರೆ ಮಾರಾಯಾ.

ನನ್ನೊಡಲೂ ಕೂಡಾ 
ಗಿಡಮರಗಳ ತಂಗಾಳಿ ಬೀಸದೇ
ಬೆಂಗಾಡಾಗಿದೆ ನೋಡು 
ಮೋಡ ಕಟ್ಟದೆ ನಾನು ಹೇಗೆ ಬರಲಿ ಹೇಳು.

-



ಸಾಧನೆ ಒಂದು ತಪಸ್ಸು
ತಪಸ್ಸಿನ ಬೆನ್ನಟ್ಟಿ ನಡೆಯಲು
ದೃಢವಾದ ಮನಸ್ಸು ಬೇಕು
ಮನಸ್ಸು ಛಲದಿಂದ ಕೂಡಿರಬೇಕು.

-



ಅತ್ತ ದಿನಗಳ ಲೆಕ್ಕ
ಒದ್ದೆಯಾದ ದಿಂಬಿನ
ಚಿತ್ತಾರ ತಪ್ಪದೇ ಹೇಳುತ್ತದೆ
ನಿನ್ನ ಗೈರು ಹಾಜರಿಯಲ್ಲಿ.

-



ಜೀವನದಲ್ಲಿ ಏನಾದರೂ
ಸಾಧನೆ ಮಾಡಬೇಕೆಂದರೆ
ಕೆಲವೊಂದು ಆಸೆ ಆಕಾಂಕ್ಷೆಗಳನ್ನು
ಬಿಡಬೇಕಾಗುತ್ತದೆ.

-



ಸಮೃದ್ಧಿ ಹೊಂದಿ ನವ ವರುಷ.


ಯುಗಾದಿ ಹಬ್ಬದ ಹಾರ್ದಿಕ
ಶುಭಾಶಯಗಳು 💐

-



ಕದ್ದು ನೋಡಲು
ಏನಿದೆ ಹೇಳು
ನಿನ್ನೊಳಗೆ ನಾನು
ನನ್ನೊಳಗೆ ನೀನು
ಅವಿತುಕೊಂಡಿರುವಾಗ?

-



ಕಣ್ಣ ಕಾಡಿಗೆಯಲ್ಲಿ
ನಿನ್ನ ಚಿತ್ರ ಬರೆದೆ
ಕಪ್ಪಾದರೂ ನೀನು
ಎಷ್ಟು ಚೆಂದ ಅಂದುಕೊಂಡೆ.

-



ಜೀವಕ್ಕೆ ಸೆಲೆಯಾಗಿ
ಭಾವಕ್ಕೆ ಜೊತೆಯಾಗಿ
ಬದುಕಿನ ಊರುಗೋಲಾಗಿ
ನಿಂದವ ನೀನು.

ಒಂಟಿತನ ಹೊಡೆದಟ್ಟಿ
ಕಿಂಚಿತ್ತೂ ಬೇಸರಿಸದೆ
ಒಂದೊಂದೆ ಮೆಟ್ಟಿಲು
ಹತ್ತಿಸಿದವ ನೀನು.

ಸುತ್ತೆಲ್ಲ ತಂಗಾಳಿ
ಮೈ ಮನ ಉತ್ತೇಜಿಸಿ
ಉಸುರಿದ ಗಾನಕ್ಕೆ
ಕಿವಿಯಾದವ ನೀನು.

ಸಾಕು ಜೀವಕೆ
ಇನ್ನೇನು ಬೇಕು
ನನ್ನನಾಳುವ ನನ್ನ
ದೊರೆ ನೀನು.

-



ದತ್ತು ಕೊಡುವೆನು ನಾನು
ಸಾಕುವವರು ಇದ್ದರೆ ಹೇಳಿ
ಅವಳ ರಗಳೆ ರಾಮಾಯಣಕೆ
ಜವಾಬ್ದಾರಳಲ್ಲ.


-


Fetching ಗೀತಾ ಜಿ ಹೆಗಡೆ Quotes