ಓ ... ನನ್ನ ಬಂಧುಗಳೆ
ಜೀವದ ಹಂಗು ತೊರೆದು
ಹಗಲಿರುಳೂ ದೇಶದ ಗಡಿ ಕಾಯುತ
ನಮಗೆ ರಕ್ಷಣೆ ಕೊಡುವವರು ನೀವು
ಖಂಡಿತಾ ನಿಮಗೆ ಬರಬಾರದಿತ್ತು ಇಂತಹ ಸಾವು.😢

ದುರುಳರ ಅಟ್ಟಹಾಸದಿಂದಾದ ಅವಾಂತರ
ನಿಮ್ಮಗಲಿಕೆಯ ನೋವು ನಮಗಿಲ್ಲಿ
ಖಂಡಿತಾ ನುಂಗಲಾಗದ ತುತ್ತು
ಮನ ಮಮ್ಮಲ ಮರುಗಿ ಜೀವ ಹಿಂಡುತಿದೆ
ಹೇ ದೇವಾ...ಉಗ್ರರ ಅಟ್ಟಹಾಸಕ್ಕೆ ಕೊನೆಯಿಲ್ಲವೇ...
ಬೇಗ ಇದರಿಂದ ಮುಕ್ತಿಗೊಳಿಸು.🙏🙏

ದುಃಖ ಸಹಿಸುವ ಶಕ್ತಿ
ಅಗಲಿಕೆಯ ನೋವು ಸ್ವೀಕರಿಸುವ ತಾಳ್ಮೆ
ನಿಮ್ಮ ಮನೆ ಮಂದಿಗೆಲ್ಲ ಆ ಭಗವಂತ ನೀಡಲಿ
ನಿಮ್ಮಾತ್ಮಕೆ ಚಿರ ಶಾಂತಿ ಸಿಗಲೆಂದು ಶಿರ ಬಾಗಿ ಪ್ರಾರ್ಥಿಸುವೆ🙏🙅

ಓಂ ಶಾಂತಿ, ಓಂ ಶಾಂತಿ, ಓಂ ಶಾಂತಿ.
ಜೈ ಹಿಂದ್॥



- 🌸ಸಂಗೀತಾ ಕಲ್ಮನೆ🌸