ಅನಿಸುತಿದೆ ಯಾಕೋ ಇಂದು
ನಡು ಬೀದಿ ನಾರಾಯಣ ನಾನೆಂದು
ನೀನಿಲ್ಲದೆ ಹೇಗೆ ದೂಡಲಿ ಮುಂದಿನ ದಿನಗಳಾ॥
ನಿನ್ನ ನೆನಪು ಕಾಡುತಿದೆ ಇಂದು
ಜೀವ ಹಿಂಡುವಷ್ಟು ಅದೆಂಥದೋ ನೋವು
ಒಮ್ಮೆ ನೀ ಬಳಿ ಬಂದು ನನ್ನ ಸಂತೈಸಲಾರೆಯಾ....॥
ಕಂಡ ಕಂಡ ದೇವರಿಗೆಲ್ಲ
ಬಾಗಿ ಬೆಂಡಾಗಿ ಬಂತು ಬೆನ್ನು ನೋವು
ಒಮ್ಮೆ ಸನಿಹ ಬಂದು ಮುಲಾಮು ನೀವಬಾರದೇ.....॥
ಸಿಟ್ಟು ಸಿಡುಗು ತವರಲೆ ಬಿಟ್ಟು
ಓಡಿ ಬಂದು ನನ್ನನು ಈಗಲೇ ಸೇರು
ಬಕಪಕ್ಷಿಯಂತೆ ಕಾದು ಕುಳಿತಿರುವೆ ಒಮ್ಮೆ ಬಾರೆಯಾ.....॥
ಎಷ್ಟು ಪರಿ ಬೇಡಿದರೂ ನೀನು
ಬಾರದಿದ್ದರೆ ನನಗೆ ಅದೇ ದೊಡ್ಡ ತಲೆ ನೋವು
ಪ್ರೇಮ ಕವಿಯಂತೆ ನಾನೇಗೆ ಬರೆಯಲಿ ಇನ್ನು ತಿಳಿಯದಾಗಿದೆ॥
24-1-2019. 7.34pm



- 🌸ಸಂಗೀತಾ ಕಲ್ಮನೆ🌸